ಉಡುಪಿ: ಓಮ್ನಿ ಕಾರು ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓಮ್ನಿ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಮ್ರತಪಟ್ಟ ಘಟನೆ ನಡೆದಿದೆ. ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಎದುರ್ ಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಡಿವೈಡರ್ ಬಳಿ ಈ ದುರ್ಘಟನೆ ನಡೆದಿದ್ದು ಮ್ರತಪಟ್ಟ ಓಮ್ನಿ ಚಾಲಕನನ್ನು ರಾಮಚಂದ್ರ ಎನ್ನಲಾಗಿದೆ.
ಉಡುಪಿ ಕಡೆಯಿಂದ ಕುಂದಪುರದತ್ತ ಸಾಗುತ್ತಿದ್ದ ಟ್ರಕ್ ಡಿವೈಡರ್ ಸಮೀಪ ಓಮ್ನಿ ಕಾರಿಗೆ ಡಿಕ್ಕಿಯಾಗಿದ್ದು ಈ ವೇಳೆ ಡಿಕ್ಕಿಯ ರಭಸಕ್ಕೆ ಓಮ್ನಿ ಕರು ನಜ್ಜುಗುಜ್ಜಾಗಿದೆ. ಕಾರಿನ ಅವಶೇಷಗಳಡಿ ಸಿಲುಕಿದ ರಾಮಚಂದ್ರ ಅವರು ಗಂಭೀರ ಗಾಯಗೋಂಡಿದ್ದು ಅವರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.