ಕರಾವಳಿ

ಸ್ಟಾರ್ ಹೊಟೇಲ್ ‘ದಿ ಓಷಿಯಲ್ ಪರ್ಲ್ ಉಡುಪಿ’ ಅದ್ಧೂರಿ ಶುಭಾರಂಭ

Pinterest LinkedIn Tumblr

occean_pearl_udupi_1

ಉಡುಪಿ : ದೇಗುಲಗಳ ನಗರಿ ಎಂದೇ ಖ್ಯಾತವಾಗಿರುವ ‘ಉಡುಪಿ’ಯ ಕಡಿಯಾಳಿಯಲ್ಲಿ ನಿರ್ಮಾಣಗೊಂಡಿರುವ ಜನತೆಯ ಬಹುನಿರೀಕ್ಷತ ಸ್ಟಾರ್ ಹೊಟೇಲ್ ‘ದಿ ಓಷಿಯನ್ ಪರ್ಲ್’ ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಶುಭಾರಂಭಗೊಂಡಿತು.

ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಶ್ರೀ ಸುಬ್ರಹ್ಮಣ್ಯ ಸ್ವಾಮೀಜಿ ಯವರ ಆಶೀರ್ವಚನ, ಮೌಲಾನಾ ಶಫಿ ಸ‌ಅದಿರವರ ದುವಾ, ಬಿಶೋಪ್ ಐಸಾಕ್ ಲೋಬೊ ರವರ ಪ್ರಾರ್ಥನೆಯೊಂದಿಗೆ ನವೆಂಬರ್ 16ರ ಬುಧವಾರದಂದು ಹೊಟೇಲ್ ತನ್ನ ಸೇವೆಯನ್ನು ಪ್ರಾರಂಭಿಸಿದೆ.

occean_pearl_udupi_2

ಈ ಅದ್ಧೂರಿ ಸಮಾರಂಭದಲ್ಲಿ ಸಮಾಜದ ಗಣ್ಯರಾದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಪ್ರಮೋದ್ ಮಧ್ವರಾಜ್, ಉಡುಪಿ ಪಟ್ಟಣ ಮುನ್ಸಿಪಾಲಿಟಿ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಮಾಧವ ಬನ್ನಂಜೆ, ಕಾರ್ಪೊರೇಟರ್ ಶ್ರೀ ಶಶಿರಾಜ್ ಕುಂದರ್, ಮಾಜಿ ಸಚಿವರಾದ ಶ್ರೀ ಜಯಪ್ರಕಾಶ್ ಹೆಗ್ಡೆ, ಶ್ರೀ ಅಭಯಚಂದ್ರ ಜೈನ್, ಶ್ರೀ ವಿನಯ್ ಕುಮಾರ್ ಸೊರಕೆ, ಕಾರ್ಕಳ ವಿಧಾನ ಸಭೆ ಮುಖ್ಯ ಸಚೇತಕರು ಶ್ರೀ ಸುನಿಲ್ ಕುಮಾರ್, ಮಾಜಿ ಶಾಸಕ ಶ್ರೀ ಗೋಪಾಲ್ ಭಂಡಾರಿ, ಉಡುಪಿ ಕ್ರೆಡೈನ ಅಧ್ಯಕ್ಷ ಶ್ರೀ ಜೆರ್ರಿ ವಿನ್ಸೆಂಟ್ ಡಯಾಸ್, ಶ್ರೀ ಪುರುಶೋತ್ತಮ ಪಿ.ಶೆಟ್ಟಿ, ಇಂದ್ರಾಳಿ ಶ್ರೀ ಜಯಕರ ಶೆಟ್ಟಿ, ಕೊಲ್ಕೆ ಬೈಲೂರು ಶ್ರೀ ಕಿಶನ್ ಹೆಗ್ಡೆ, ಕಿದಿಯೂರು ಶ್ರೀ ಉದಯ್ ಕುಮಾರ್ ಶೆಟ್ಟಿ, ಮಟ್ಟಾರು ಶ್ರಿ ರತ್ನಾಕರ ಹೆಗ್ಡೆ, ಶ್ರೀ ಯಶ್‌ಪಾಲ್ ಸುವರ್ಣ, ಶ್ರೀ ಮನೋಹರ್ ಶೆಟ್ಟಿ, ಶ್ರೀ ಪ್ರದೀಪ್ ಜಿ.ಪೈ, ಶ್ರೀ ವಿಲಾಸ್ ನಾಯಕ್, ಶ್ರೀ ಎ.ಜೆ.ಶೆಟ್ಟಿ, ಮಣಿಪಾಲ್ ಮೀಡಿಯಾ ನೆಟ್ವರ್ಕ್‌ನ ಶ್ರೀ ಟಿ. ಸತೀಶ್ ಪೈ, ಸಿ‌ಇ‌ಒ ಶ್ರೀ ವಿನೋದ್ ಕುಮಾರ್, ಶ್ರೀ ಸುಪ್ರಸಾದ್ ಶೆಟ್ಟಿ, ಶ್ರೀ ಸಿರಾಜ್ ಅಹಮದ್ ಮುಂತಾದ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾದರು.

‘ದಿ ಓಶಿಯನ್ ಪರ್ಲ್ ಹೊಟೇಲ್ಸ್ ಪ್ರೈ.ಲಿ’ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಯರಾಮ್ ಬನಾನ್, ಎಮ್‌ ಡಿ ಶ್ರೀ ರೋಷನ್ ಬನಾನ್, ಉಪಾಧ್ಯಕ್ಷ ಶ್ರೀ ಬಿ.ಎನ್ ಗಿರೀಶ್, ಜನರಲ್ ಮ್ಯಾನೇಜರ್ ಶ್ರೀ ಬಿಜು ವರ್ಗೀಸ್, ಶ್ರೀ ದಿನೇಶ್ ಬನಾನ್, ಪ್ರಾಜೆಕ್ಟ್ ಮ್ಯಾನೇಜರ್ ಶ್ರೀ ಶಿವ ಕುಮಾರ್, ಹೊಟೇಲ್ ಕಟ್ಟಡದ ಪ್ರಮೋಟರ್ ಮತ್ತು ಗ್ರಾಂಡ್ ಡೆ ಹಿಮಾಲಯಾ ಹೊಟೇಲ್ಸ್ ಮತ್ತು ರೆಸಾರ್ಟ್ಸ್ ಪ್ರೈ.ಲಿ ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಮಹಮ್ಮದ್ ಸಲೀಂ ಮತ್ತಿತರರು ಉಪಸ್ಥಿತರಿದ್ದರು.

‘ದಿ ಓಷಿಯಲ್ ಪರ್ಲ್ ಉಡುಪಿ’ : ವೈಶಿಷ್ಟ್ಯತೆಗಳು

occean_pearl_udupi_3

‘ದಿ ಓಷಿಯಲ್ ಪರ್ಲ್ ಉಡುಪಿ’ ಇಲ್ಲಿರುವ ಸಾಗರ್‌ ರತ್ನ ವೆಜ್ ರೆಸ್ಟೋರೆಂಟ್, ಕೋರಲ್ ಮಲ್ಟಿ ಕ್ವಿಜ್ಹಿನ್ ಡೈನ್ ರೆಸ್ಟೋರೆಂಟ್, ಟೈಡ್ 24×7 ಕಾಫಿ ಶಾಪ್, ದ ಜಾಜ್ಹ್ ಲಾಂಜ್ ಬಾರ್, ಜೇಡ್, ಪಾರ್ಟಿ ಹಾಲ್ ಹಾಗೂ ಪೆಸಿಫಿಕ್ ಬ್ಯಾಂಕ್ವೆಟ್ ಹಾಲ್ ವಿಭಾಗಗಳು ಗ್ರಾಹಕರ ಸೇವೆಗೆ ಸಿದ್ಧವಾಗಿವೆ.

ನೆಲ ಮಹಡಿಯಲ್ಲಿರುವ ಸಾಗರ್‌ರತ್ನ ವೆಜ್ ರೆಸ್ಟೋರೆಂಟ್ ಗ್ರಾಹಕರಿಗೆ ಉತ್ತರ ಹಾಗೂ ದಕ್ಷಿಣ ಭಾರತದ ಹೆಸರಾಂತ ಸ್ವಾದಿಷ್ಟ ಖಾದ್ಯಗಳ ಸವಿಯನ್ನು ಒದಗಿಸಲಿದೆ.

ಹಾಗೆಯೇ ಇದೇ ಮಹಡಿಯಲ್ಲಿರುವ 24×7 ಕಾಲ ಸೇವೆಗೆ ಲಭ್ಯವಿರುವ ಟೈಡ್, ನಾನ್‌ವೆಜ್ ಪ್ರಿಯರಿಗೆ ದೇಶದ ಹಾಗೂ ಯುರೋಪಿಯನ್ ವೈವಿಧ್ಯಮಯ ನಾನ್‌ವೆಜ್ ಖಾದ್ಯಗಳನ್ನು ಒದಗಿಸುವ ಮೊದಲ ಮಹಡಿಯಲ್ಲಿರುವ ಕೋರಲ್, ಉತ್ತಮ ಲಾಂಜ್ ಬಾರ್‌ನ ಆನಂದವನ್ನು ಒದಗಿಸುವ ಜಾಝ್ ಜತೆಗೆ ವಿಶೇಷ ಸಂಭ್ರಮಾಚರಣೆ, ಕಾರ್ಯಾಗಾರಗಳು, ಪತ್ರಿಕಾ ಗೋಷ್ಠಿ ಇತ್ಯಾದಿಗಳಿಗಾಗಿ ಸುವ್ಯವಸ್ಥಿತ ಕಾನ್ಫರೆನ್ಸ್ ಹಾಲ್ ಇದೇ ಮಹಡಿಯಲ್ಲಿದ್ದು ಇವೆಲ್ಲವೂ ಗ್ರಾಹಕರ ಸೇವೆಗಾಗಿ ಕಾತರವಾಗಿವೆ. ಇದಕ್ಕೆಲ್ಲಾ ಪೂರಕವಾಗಿ ದೇಶ ವಿದೇಶಗಳಲ್ಲಿ ಕಾರ್ಯನಿರ್ವಹಿಸಿದ ಅನುಭವಿ ಶೆಫ್‌ಗಳು ಖಾದ್ಯಗಳಿಗೆ ಮತ್ತಷ್ಟು ರುಚಿಯ ಸ್ಪರ್ಷವನ್ನು ನೀಡಲಿದ್ದಾರೆ.

2, 3 ಮತ್ತು 4ನೇ ಅಂತಸ್ತಿನಲ್ಲಿ ಉತ್ಕೃಷ್ಟ ದರ್ಜೆಯ 45 ರೂಂಗಳು ಇದ್ದು 3 ಸ್ವೀಟ್ ಹಾಗೂ 3 ಕ್ಲಬ್ ರೂಂಗಳನ್ನು ಒಳಗೊಂಡಿವೆ. 5ನೇ ಮಹಡಿಯಲ್ಲಿ ಸುಮಾರು 500 ಜನರ ಸಭೆ, ಸಮಾರಂಭವನ್ನೇರ್ಪಡಿಸಬಹುದಾದ ಬ್ಯಾಂಕ್ವೆಟ್ ಹಾಲ್ ಕೂಡಾ ಇದೆ.

2.5ಎಕ್ರೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಅವಕಾಶವಿದ್ದು ಗ್ರಾಹಕರ ಅನುಕೂಲತೆಗಾಗಿ ‘ವ್ಯಾಲೇ ಪಾರ್ಕ್’ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬಿಸಿನೆಸ್ ಸೆಂಟರ್, ಫಿಟ್‌ನೆಸ್ ಸೆಂಟರ್, ಟ್ರಾವೆಲ್ ಡೆಸ್ಕ್, ಡಾಕ್ಟರ್ ಆನ್ ಕಾಲ್, ಸೌಲಭ್ಯಗಳನ್ನು ಸಹ ಒದಗಿಸಲಾಗುತ್ತದೆ.

‘ದಿ ಓಷಿಯನ್ ಪರ್ಲ್ ಉಡುಪಿ’ ಇಲ್ಲಿನ ಜನರಿಗೆ ಉತ್ತಮ ಗುಣಮಟ್ಟದ ಸೇವೆ ಹಾಗೂ ದೇಶವಿದೇಶಗಳ ಉತ್ಕೃಷ್ಟ ಖಾದ್ಯಗಳನ್ನು ಒದಗಿಸುವ ಜತೆಗೆ ತಮ್ಮ ಸಂಭ್ರಮಾಚರಣೆಗಳಿಗೆ ಮತ್ತಷ್ಟು ಮೆರುಗನ್ನು ಒದಗಿಸಲು ಉತ್ತಮ ಹಾಲ್ ಹಾಗೂ ಪೂರಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.

ಇದಕ್ಕಾಗಿ ‘ದಿ ಓಷಿಯನ್ ಪರ್ಲ್ ಉಡುಪಿ’ ಇಲ್ಲಿನ ಜನರ ಸಂಪೂರ್ಣ ಸಹಕಾರ, ಪ್ರೀತಿ ವಿಶ್ವಾಸವನ್ನು ಬಯಸುತ್ತದೆ ಹಾಗೂ ಇಲ್ಲಿನ ಜನರ ಪಾರಂಪರಿಕ ಅಗತ್ಯತೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಭರವಸೆಯನ್ನು ನೀಡುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಯರಾಮ್ ಬನಾನ್ ತಿಳಿಸಿದ್ದಾರೆ.

Comments are closed.