ಉಡುಪಿ: ಮೂರು ಚಕ್ರದ ಸೈಕಲ್ ಅದು. ಅದರಲ್ಲಿ ವಿವಿಧ ಸ್ಲೋಗನ್ ಗಳು, ಸೈಕಲ್ ತುಳಿದ ವ್ಯಕ್ತಿ ಜಿಲ್ಲಾಧಿಕಾರಿ ಕಚೇರಿ ತನಕ ಸಾಗಿ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿದರು.
ಇದು ನಾಗರೀಕ ವೇದಿಕೆಯ ನಿತ್ಯಾನಂದ ಒಳಕಾಡು ಪೊಲೀಸ್ ಪರ ಮಾಡಿದ್ದ ವಿಶಿಷ್ಟ ಪ್ರತಿಭಟನೆಯ ದೃಶ್ಯವಿದು..
ಸೈಕಲ್ ನಲ್ಲಿ ಪೊಲೀಸರ ಪೋಸ್ಟರ್, ವಿವಿಧ ಸ್ಲೋಗನ್, ಸೈಕಲ್ ನಲ್ಲಿ ಕೂತು ಸೈಕಲ್ ತುಳಿಯುತ್ತಿರುವ ಈ ವ್ಯಕ್ತಿ ನಿತ್ಯಾನಂದ ಒಳಕಾಡು. ನಾಗರೀಕ ವೇದಿಕೆಯ ಕಾರ್ಯದರ್ಶಿಯಾಗಿರುವ ನಿತ್ಯಾನಂದ ವಿಶಿಷ್ಟ ಪ್ರತಿಭಟನೆಯಲ್ಲಿ ಎತ್ತಿದ ಕೈ . ಪೊಲೀಸರ ಪ್ರತಿಭಟನೆಯ ಹಿನ್ನಲೆಯಲ್ಲಿ ಅವರಿಗೆ ಬೆಂಬಲವಾಗಿ ಪ್ರತಿಭಟನೆ ನಡೆಸಿದ ನಿತ್ಯಾನಂದ ಒಳಕಾಡು ಜಿಲ್ಲಾಧಿಕಾರಿ ಕಚೇರಿಯ ತನಕ ಸಾಗಿ ಪೊಲೀಸರ ನ್ಯಾಯಯುತ ಬೇಡಿಕೆಯನ್ನು ಇಡೇರಿಸುವಂತೆ ಒತ್ತಾಯಿಸಿದರು. ಇವರಿಗೆ ಅನೇಕ ಸಂಘಟನೆಯವರು ಬೆಂಬಲವನ್ನು ನೀಡಿದರು.
Comments are closed.