ದುಬೈ. ಡಿ.ಕೆ.ಎಸ್.ಸಿ. ಯು.ಎ.ಇ.ರಾಷ್ಟ್ರೀಯ ಸಮಿತಿ ವತಿಯಿಂದ ಯು.ಎ.ಇ. ಗೆ ಆಗಮಿಸಿದ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಇದರ ಅಧೀನ ಸಂಸ್ಥೆಯಾದ ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್ ಇದರ ಉಪಾದ್ಯಕ್ಷರಾದ ಜನಾಬ್.ಹಾಜಿ MHB ಮುಹಮ್ಮದ್ ಹಾಗೂ ಡಿ.ಕೆ.ಎಸ್.ಸಿ ಸೆಂಟ್ರಲ್ ಕಮಿಟಿ ಲೆಕ್ಕಪರಿಶೋದಕರಾಗಿದ್ದ ಜನಾಬ್. ಹಾಜಿ ಅಬ್ದುಲ್ ರಹಿಮಾನ್ ಪಾಣಾಜೆ ರವರನ್ನು ಜನಾಬ್.ಹಾಜಿ.ಎಂ.ಇ.ಮೂಳೂರು ರವರ ನಿವಾಸದಲ್ಲಿ ಸಭೆ ಸೇರಿ ಅವರನ್ನು ಸನ್ಮಾನಿಸಲಾಯಿತು.
ಸಭೆಯು ಡಿ.ಕೆ.ಎಸ್.ಸಿ. ಯು.ಎ.ಇ.ರಾಷ್ಟ್ರೀಯ ಸಮಿತಿ ಸಲಹೆಗಾರರಾದ ಜನಾಬ್.ಅಬ್ದುಲ್ಲ ಮುಸ್ಲಿಯಾರ್ ಕುಡ್ತಮುಗೇರು ರವರ ದುವಾದೊಂದಿಗೆ ಡಿ.ಕೆ.ಎಸ್.ಸಿ. ಯು.ಎ.ಇ.ರಾಷ್ಟ್ರೀಯ ಸಮಿತಿಯ ಉಪಾಧ್ಯಕ್ಷರಾದ ಜನಾಬ್ ಹಾಜಿ ಎಂ.ಇ.ಮೂಳೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಡಿ.ಕೆ.ಎಸ್.ಸಿ. ಯು.ಎ.ಇ.ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಜನಾಬ್.ಹುಸೈನ್ ಹಾಜಿ ಕಿನ್ಯ, ಜನಾಬ್.ಅಬ್ದುಲ್ಲ ಮುಸ್ಲಿಯಾರ್ ಕುಡ್ತಮುಗೇರು ಹಾಗೂ ಜನಾಬ್. ಇ.ಕೆ.ಇಬ್ರಾಹಿಂ ಕಿನ್ಯ ರವರು ಸಂದರ್ಭೂಜಿತವಾಗಿ ಮಾತಾಡಿದರು.
ಜನಾಬ್ ಹಾಜಿ ಎಂ.ಇ.ಮೂಳೂರು ರವರು ಅತಿಥಿಗಳ ಪರಿಚಯವನ್ನು ಮಾಡಿದರು. ಸನ್ಮಾನ ಸ್ವೀಕರಿಸಿ ಮಾತಾಡಿದ ಜನಾಬ್.ಹಾಜಿ MHB ಮುಹಮ್ಮದ್ ರವರು ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್ ಇದರಲ್ಲಿ ಪ್ರವರ್ತಿಸಲು ಅಲ್ಲಾಹು ನೀಡಿದ ವರವಾಗಿದೆ ಅಲ್ಲಿಯ ಕೆಲವು ನಿದರ್ಶನ ವನ್ನು ಸಭೆಯಲ್ಲಿ ತಿಳಿಸಿದರು. ಜನಾಬ್. ಹಾಜಿ ಅಬ್ದುಲ್ ರಹಿಮಾನ್ ಪಾಣಾಜೆ ರವರು ಡಿ.ಕೆ.ಎಸ್.ಸಿ ಸಂಘಟನೆ ನಡೆದು ಬಂದ ಬಗ್ಗೆ ವಿವರಿಸುತ್ತಾ ಶಭ ಹಾರೈಸಿದರು.
ಸಭೆಯಲ್ಲಿ ರಾಷ್ಟ್ರೀಯ ಸಮಿತಿ ಪದಾದಿಕಾರಿಗಳಾದ ಜನಾಬ್.ಶಕೂರ್ ಮನಿಲಾ, ಜನಾಬ್ ಬಾರೂದ್ ಇಸ್ಮಾಯಿಲ್ ಮೂಳೂರು,ಜನಾಬ್ ಹಂಝ ಮೂಳೂರು, ಜನಾಬ್ ಹಾಜಿ ಅಬ್ದುಲ್ ರಹಿಮಾನ್ ಸಂಟ್ಯಾರ್ ,ಜನಾಬ್.ಅಬ್ಬಾಸ್ ಪಾಣಾಜೆ, ದೇರಾ ಯುನಿಟ್ ಸಂಚಾಲಕರಾದ ಜನಾಬ್.ಇಬ್ರಾಹಿಂ ಶರೀಪ್ ಅರ್ಲಪದವು, ಜನಾಬ್.ಹಾಜಿ.ಮುಹಮ್ಮದ್ ಮುರ ಪುತ್ತೂರು , ಜನಾಬ್. ಹಾಜಿ ಮಜೀದ್ ಉಚ್ಚಿಲ ಶಾರ್ಜಾ ಯೂನಿಟ್ ಸಂಚಾಲಕರಾದ ಜನಾಬ್ ಉಮ್ಮರ್ ಪಾಣಾಜೆ ಉಪಸ್ಥಿತರಿದ್ದರು. ಸಭೆಯಲ್ಲಿ ಜನಾಬ್ ಯುಸುಪ್ ಅರ್ಲಪದವು ಸ್ವಾಗತಿಸಿ ಜನಾಬ್. ಹಾಜಿ ಅಬ್ದುಲ್ಲ ಬೀಜಾಡಿ ವಂದಿಸಿದರು.