ಕರಾವಳಿ

ಆಟೋ ಚಾಲಕನಿಂದ ಬಾಡಿಗೆ ವಿಚಾರದಲ್ಲಿ ಫ್ಯಾಸೆಂಜರ್ ಮೇಲೆ ಹಲ್ಲೆ

Pinterest LinkedIn Tumblr

Auto passenger assult by driver

ಉಡುಪಿ: ಪ್ರಯಾಣಿಕರನ್ನು ಹೇಳಿದಲ್ಲಿಗೆ ಬಿಡಬೇಕಾದ ಆತೋರಿಕ್ಷಾ ಚಾಲಕ ಕ್ಷುಲ್ಲಕ ಕಾರಣಕ್ಕೆ ಅದೇ ಪ್ರಯಾಣಿಕರ ಮೇಲೆಯೇ ತಿರುಗಿ ಬಿದ್ದು ಹಲ್ಲೆ ನಡೆಸಿದ ಘಟನೆ ಶನಿವಾರ ಸಂಜೆ ಸುಮಾರಿಗೆ ಉಡುಪಿಯ ಡಯಾನ ಟಾಕೀಸ್ ಬಳಿ ನಡೆದಿದೆ.

ರಿಕ್ಷಾ ಚಾಲಕ ಮ್ಯಾಕ್ಸಿಮ್‌ ಆಟೋ ರಿಕ್ಷ ನಂಬರ್‌ ಕೆಎ 20 ಎ 8292 ಎಂಬಾತನೇ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆ ವಿವರ: ಸಂತೋಷ ಬನ್ನಂಜೆ ಎನ್ನುವವರು ನಾರಾಯಣ ಗುರು ಮಂದಿರಕ್ಕೆ ಕಾರ್ಯಕ್ರಮದಲ್ಲಿ ಪಾಲ್ಘೊಳ್ಲಲು ಸುರೇಶ, ಕಿರಣ್‌ ಮತ್ತು ಸುಧಾಕರ ಎಂಬವರೊಂದಿಗೆ ಬಂದಿದ್ದು ಊಟ ಮಾಡಿದ ಬಳಿಕ ಮಂದಿರದ ಹೊರಗೆ ನಿಂತಿದ್ದ ಒಂದು ರಿಕ್ಷಾದಲ್ಲಿ ಡಯಾನಾ ಟಾಕೀಸ್‌ ಹತ್ತಿರ ಹೋಗಲು ರಿಕ್ಷಾದಲ್ಲಿ ಹತ್ತಿ ಕುಳಿತಿದ್ದಾರೆ. ಮುಂದೆ ಹೋಗುವಾಗ ರಿಕ್ಷಾ ಚಾಲಕನು 4 ಜನ ಇದ್ದೀರಲ್ಲ ಡಬ್ಬಲ್‌ ಬಾಡಿಗೆ ಕೊಡಬೇಕೆಂದು ಕೇಳಿದಾಗ ನಾವು ಇಲ್ಲಿಯೇ ಇಳಿಯುತ್ತೇವೆ ಎಂದು ಸಂತೋಷ್ ಹೇಳಿದ್ದು ಒಮ್ಮೇಲೆ ರಿಕ್ಷಾ ನಿಲ್ಲಿಸಿದ ರಿಕ್ಷಾ ಚಾಲಕನು ಕಿರಣನಿಗೆ ಹೊಡೆಯುಲು ಮುಂದಾಗಿದ್ದಾನೆ.
ಈ ನಡುವೆ ಸಂತೋಷ್ ಮತ್ತು ಸುರೇಶ ತಡೆಯಲು ಹೋದಾಗ ರಿಕ್ಷಾ ಚಾಲಕ ಒಂದು ಸಣ್ಣ ಚೂರಿಯನ್ನು ಕಿಸೆಯಿಂದ ತೆಗೆದು ಬೀಸಿದಾಗ ಸಂತೋಷ್ ಎಡಬದಿಯ ಗಡ್ಡದ ಹತ್ತಿರ ತಾಗಿ ರಕ್ತ ಬರುವ ಗಾಯವಾಯಿತು ಮತ್ತು ಸುರೇಶ ಬಲ ಕಣ್ಣಿನ ಕೆಳಗೆ ಸಣ್ಣ ರಕ್ತಗಾಯವಗಿದೆ ಎನ್ನಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment