ಬಂಟ್ವಾಳ,ಸೆ.19: ರಾಷ್ಟ್ರಸೇವಿಕಾ ಸಮಿತಿ ಕಲ್ಲಡ್ಕ ಇದರ ವತಿಯಿಂದ ಗುರುವಾರ ಸಂಜೆ ಜಮ್ಮು ಕಾಶ್ಮೀರ ನೆರೆ ಪರಿಹಾರ ನಿಧಿ ಸಂಗ್ರಹ ಅಭಿಯಾನವನ್ನು ಕಲ್ಲಡ್ಕ ಪೇಟೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ರಾಷ್ಟ್ರ ಸೇವಿಕಾ ಸಮಿತಿ ಡಾ| ಕಮಲಾ ಪ್ರಭಾಕರ ಭಟ್ ಇವರು ನೇತ್ರತ್ವ ವಹಿಸಿದ್ದರು. ಸಾವಿತ್ರಿ ವಸಂತ ಮಾದವ, ಸೀಮಾ ಕೃಷ್ಣಪ್ರಸಾದ್, ರೂಪಕಲಾ ಮಾತಾಜಿ, ಶಿಲ್ಪಾ ಮಾತಾಜಿ, ಮಾನಸ, ವಲಯ ವಿ.ಹಿ.ಪ.ಅಧ್ಯಕ್ಷ ಕ.ಕೃಷ್ಣಪ್ಪ, ಭಜರಂಗದಳ ಅಧ್ಯಕ್ಷ ಮಿತುನ್ ಕುಮಾರ್ ಹಾಗೂ ಪ್ರಮುಖರಾದ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಜಿ.ಪಂ.ಸದಸ್ಯ ಚೆನ್ನಪ್ಪ ಕೊಟ್ಯಾನ್, ತಾ.ಪಂ.ಸದಸ್ಯ ದಿನೇಶ್ ಅಮ್ಟೂರು, ಯತೀನ್,ರಾಜೇಶ್, ಯೋಗೇಶ್,ನಿತಿನ್ ಮೊದಲಾದವರು ಭಾಗವಹಿಸಿದ್ದರು.