ನವದೆಹಲಿ: ಹಣ ನೀಡಲಿಲ್ಲವೆಂದು ಮಗನೋರ್ವ ತಾಯಿಯನ್ನೆ ಹತ್ಯೆಗೈದ ಘಟನೆ ದೆಹಲಿಯಲ್ಲಿ ನಡೆದಿದೆ.
ಆಶುತೋಷ್ (22), ಮಾದಕ ವ್ಯಸನಿಯಾಗಿದ್ದು ಸೆಪ್ಟೆಂಬರ್ 17 ರಂದು ಮುಂಜಾವು ಪ್ರಾರ್ಥನೆ ಮಾಡುತ್ತಿದ್ದ ತಾಯಿಯ ಬಳಿ ಹಣ ಕೇಳಿದ್ದನು. ಆದರೇ ಇದಕ್ಕೆ ಆಕೆ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ತಲೆಗೆ ಬಲವಾದ ವಸ್ತುವಿನಿಂದ ಹೊಡೆದು ಅಲ್ಲಿಂದ ಕಾಲ್ಕಿತ್ತಿದ್ಧಾನೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶಿಕ್ಷಾ ದೇವಿಯನ್ನು ಮತ್ತೋರ್ವ ಮಗ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು ಅದರೇ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ದೆಹಲಿ ಈಶಾನ್ಯ ಪೊಲೀಸರು ಆಶುತೋಷ್ ಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಅಕ್ಟೋಬರ್ 21 ರಂದು ಗಾಜಿಯಾಬಾದ್ ನಲ್ಲಿ ಆತನಿರುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
Comments are closed.