ರಾಷ್ಟ್ರೀಯ

ಭಿಕ್ಷುಕನ ಹಣ ಏಣಿಸಿ ಸುಸ್ತಾದ ಪೊಲೀಸ್‌ ಸಿಬ್ಬಂದಿಗಳು..!

Pinterest LinkedIn Tumblr

ಮುಂಬೈ : ರೈಲು ಅಪಘಾತದಲ್ಲಿ ಸಾವನ್ನಪ್ಪಿರುವ ಭಿಕ್ಷುಕನ ಗುಡಿಸಲಿನಲ್ಲಿ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿರುವ ಘಟನೆ ಮುಂಬೈ ಯಲ್ಲಿ ನಡೆದಿದೆ.

ಬಿರ್ಭಿಚಂದ್ ಆಜಾದ್ (62) ಅವರು ಶುಕ್ರವಾರ ರಾತ್ರಿ ಗೋವಂಡಿ ನಿಲ್ದಾಣದ ಬಳಿ ರೈಲ್ವೆ ಹಳಿಗಳನ್ನು ದಾಟುತ್ತಿದ್ದಾಗ ರೈಲಿಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.

ರೈಲ್ವೆ ಪೊಲೀಸರ ತಂಡವು ಗೋವಂಡಿಯ ಬಳಿಯ ಆತನ ಮನೆಗೆ ತೆರಳಿದ ವೇಳೆಯಲ್ಲಿ ಗುಡಿಸಿಲಿನಲ್ಲಿ ಇಟ್ಟಿದ 1.77 ಲಕ್ಷ ರೂ. ನಾಣ್ಯಗಳನ್ನು ಏಣಿಸಲು ಅವರು ಎಂಟು ಗಂಟೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ.

ಇನ್ನು ಇದಲ್ಲದೇ 8.77 ಲಕ್ಷ ಮೌಲ್ಯದ ವಿವಿಧ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿಗಳ ಮಾಹಿತಿ ಕೂಡ ಸಿಕ್ಕಿದೆ ಎನ್ನಲಾಗಿದೆ. ಪೊಲೀಸ್ ತಂಡವು ಆಜಾದ್ ಅವರ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಅವರ ಹೆಸರಿನಲ್ಲಿ ನೀಡಲಾದ ಹಿರಿಯ ನಾಗರಿಕ ಕಾರ್ಡ್ ಅನ್ನು ರಾಜಸ್ಥಾನದಲ್ಲಿ ಪತ್ತೆ ಮಾಡಿದೆ. ಆತನ ಕುಟುಂಬವನ್ನು ಪತ್ತೆ ಹಚ್ಚಲು ರಾಜಸ್ಥಾನಕ್ಕೆ ಪ್ರಯಾಣಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಏತನ್ಮಧ್ಯೆ, ಆಜಾದ್ ಅವರ ಮೃತ ದೇಹವನ್ನು ವನ ವಸ್ತುಗಳನ್ನು ಅವನ ಸಂಬಂಧಿಕರಿಗೆ ನೀಡಿದ್ದಾರೆ ಅಂತ ತಿಳಿದು ಬಂದಿದೆ.

Comments are closed.