ರಾಷ್ಟ್ರೀಯ

ನನ್ನ ಪ್ರಾಣ ಕೊಡುತ್ತೇನೆ, ರಾಜಿಯಾಗುವುದಿಲ್ಲ: ಮಮತಾ ಬ್ಯಾನರ್ಜೀ

Pinterest LinkedIn Tumblr


ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಕೇಂದ್ರಸರ್ಕಾರ ಮತ್ತು ಮಮತಾ ಬ್ಯಾನರ್ಜೀ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಈಗ ಮಮತಾ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಸದ್ಯ ನಡೆಯುತ್ತಿರುವ ಬೆಳವಣಿಗೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಂಗಾಳದ ದೀದೀ ಪ್ರಾಣ ಕೊಡಲು ಸಿದ್ದವೇ ಹೊರತು ರಾಜೀಯಾಗುವ ಮಾತೇ ಇಲ್ಲ ಎನ್ನುವ ಮೂಲಕ ಈಗ ಕೇಂದ್ರ ಸರ್ಕಾರದ ವಿರುದ್ದ ರಣಕಹಳೆ ಊದಿದ್ದಾರೆ.

“ನನ್ನ ಪ್ರಾಣ ಕೊಡಲು ಸಿದ್ದ ಆದರೆ ಯಾವುದೇ ರಾಜಿಯಾಗುವ ಮಾತೇ ಇಲ್ಲ. ನೀವು ನಮ್ಮ ತೃಣಮೂಲ ಕಾರ್ಯಕರ್ತರನ್ನು ಟಚ್ ಮಾಡಿದಾಗ ಬೀದಿಗಿಳಿಯಲಿಲ್ಲ. ಆದರೆ ಅವರು ಕೊಲ್ಕತ್ತಾ ಪೋಲಿಸ್ ಕಮಿಷನರ್ ಹುದ್ದೆಯನ್ನು ಅಪಮಾನ ಮಾಡಿದಾಗ ನನಗೆ ಸಿಟ್ಟು ಬಂತು” ಎಂದು ಮಮತಾ ಬ್ಯಾನರ್ಜೀ ತಿಳಿಸಿದ್ದಾರೆ.

ಚಿಟ್ ಫಂಡ್ ವಿಚಾರವಾಗಿ ಸಿಬಿಐ ಕೋಲ್ಕತ್ತಾ ಕಮಿಷನರ್ ರನ್ನು ಪ್ರಶ್ನಿಸಿದಾಗ ಮಮತಾ ಧರಣಿ ಸತ್ಯಾಗ್ರಹಕ್ಕೆ ಕುಳಿತುಕೊಳ್ಳುವ ಮೂಲಕ ಈಗ ಬೆಂಗಾಳದಲ್ಲಿ ರಾಜಕೀಯ ಬಿರುಗಾಳಿ ಬಿಸಿದೆ.ಈಗ ಮಮತಾ ಬೆಂಬಲಕ್ಕೆ ಪ್ರತಿಪಕ್ಷಗಳು ಬೆಂಬಲ ನೀಡಿವೆ.

Comments are closed.