ಪಂಜಾಬ್ : ಹೊಸ ಬಾಳಿಗೆ ಅಡಿಯಿಡುವ ಸಂತಸ, ಇನ್ನೇನು ಹಸೆ ಮಣೆ ಏರುವ ಸಾಕಷ್ಟು ಕನಸಿನೊಂದಿಗೆ ಮದುವೆಯ ಈ ಘಳಿಗೆ ಇನ್ನಷ್ಟು ಅಂದ ಹೆಚ್ಚಿಸಿಕೊಳ್ಳಲು ಬ್ಯೂಟಿ ಪಾರ್ಲರ್ಗೆ ಹೋದ ಆಕೆಗೆ ತನ್ನ ಬದುಕಿನಲ್ಲಿ ಬಿರುಗಾಳಿಯೊಂದು ಬೀಸಲಿದೆ ಎಂಬ ಯಾವ ಮುನ್ಸೂಚನೆ ಕೂಡ ಇರಲಿಲ್ಲ. ವರನೊಂದಿಗೆ ಸಪ್ತಪದಿ ತುಳಿಯುವ ಮುನ್ನ ದುಷ್ಟರ ಗುಂಪೊಂದು ವಧುವನ್ನೆ ಹೊತ್ತೊಯ್ದ ಘಟನೆ ಪಂಜಾಬ್ನಲ್ಲಿ ನಡೆದಿದೆ.
ಇಲ್ಲಿನ ಶ್ರೀ ಮುಕ್ತ ಸಾಹೀಬ್ ಪ್ರದೇಶದಲ್ಲಿ ಬ್ಯೂಟಿ ಪಾರ್ಲರ್ನಲ್ಲಿ ಮದುವೆಗೆ ಕೆಲವೆ ಗಂಟೆ ಇರುವಾಗ ಮಧುಮಗಳನ್ನು ಬಲವಂತವಾಗಿ ಹೊತ್ತೊಯ್ದಿದ್ದು, ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದೆ.
ಶನಿವಾರ ಮುಂಜಾನೆ 5.30ಕ್ಕೆ ಬ್ಯೂಟಿ ಪಾರ್ಲರ್ಗೆ ಹೋದ ಯುವತಿಗಾಗಿ ಕಾದು ಕುಳಿತ ಗುಂಪು ಆಕೆ ಹೊರ ಬರುತ್ತಿದ್ದಂತೆ ಬಲವಂತವಾಗಿ ಕಾರಿನಲ್ಲಿ ಹತ್ತಿಸಿಕೊಂಡು ಹೋಗಿದ್ದಾರೆ. ಈ ವೇಳೆ ಯುವತಿ ಅವರಿಗೆ ಪ್ರತಿರೋಧ ತೋರಿರುವುದು ಕೂಡ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿರುವ ಎಸ್ಪಿ ರಣಬೀರ್ ಸಿಂಗ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುವುದು.
Comments are closed.