ರಾಷ್ಟ್ರೀಯ

ದೇಶದ ಜನತೆಯ ವಿರುದ್ಧ ಪ್ರತಿಪಕ್ಷಗಳು ಒಗ್ಗಟ್ಟು ಪ್ರದರ್ಶನ ಮಾಡುತ್ತಿವೆ: ‘ಮಹಾಘಟಬಂಧನ್‌’ ವಿರುದ್ಧ ಮೋದಿ ವಾಗ್ದಾಳಿ

Pinterest LinkedIn Tumblr

ಸಿಲ್ವಸ್ಸ: ಕೋಲ್ಕತಾದಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ‘ಮಹಾಘಟಬಂಧನ್‌’ ಮೆಗಾ ರ್ಯಾಲಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಜನತೆಯ ವಿರುದ್ಧ ಪ್ರತಿಪಕ್ಷಗಳು ಒಗ್ಗಟ್ಟು ಪ್ರದರ್ಶನ ಮಾಡುತ್ತಿವೆ ಎಂದು ಟೀಕಿಸಿದ್ದಾರೆ.

ಇಂದು ಗುಜರಾತ್ ನ ದಾದರ್‌ ಹಾಗೂ ಹವೇಲಿಯ ನಡುವಿನ ಬುಡಕಟ್ಟು ಜನ ವಾಸಿಸುವ ಸಿಲ್ವಸ್ಸನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ‘ಮಹಾಘಟಬಂಧನ್‌’ ಜನ ವಿರೋಧಿಯಾಗಿದ್ದು, ಭಾರತ ಲೂಟಿ ಮಾಡುವುದರಿಂದ ವಂಚಿತರಾದ ಪಕ್ಷಗಳು ಈಗ ಒಂದಾಗಿವೆ ಎಂದರು.

ಭ್ರಷ್ಟಾಚಾರದ ವಿರುದ್ಧ ನಾನು ತೆಗೆದುಕೊಂಡ ಕ್ರಮದಿಂದಾಗಿ ಕೆಲವರು ಆಕ್ರೋಶಗೊಂಡಿದ್ದಾರೆ. ಸಾರ್ವಜನಿಕರ ಹಣ ಲೂಟಿ ಮಾಡುವುದರಿಂದ ವಂಚಿತರಾದವರೆಲ್ಲ ಸೇರಿಕೊಂಡು ‘ಮಹಾಘಟಬಂಧನ್‌’ ರಚನೆ ಮಾಡಿದ್ದಾರೆ ಎಂದು ಪ್ರಧಾನಿ ಆರೋಪಿಸಿದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕೇವಲ ಒಬ್ಬ ಶಾಸಕನನ್ನು ಮಾತ್ರ ಹೊಂದಿದೆ. ಆದರೂ ಅವರಿಗೆ ನಮ್ಮ ಭಯ ಇದೆ. ಹೀಗಾಗಿ ನಮ್ಮನ್ನು ಕಾಪಾಡಿ ಎಂದು ಕೇಳಿಕೊಳ್ಳುತ್ತಿರುವುದಾಗಿ ಮೋದಿ ವ್ಯಂಗ್ಯವಾಡಿದರು.

Comments are closed.