ರಾಷ್ಟ್ರೀಯ

ಔರಂಗಜೇಬನಂತೆ ರಾಹುಲ್ ಗಾಂಧಿ ಕಾಂಗ್ರೆಸ್ಸಿನ ಕೊನೆಯ ಸಾಮ್ರಾಟ

Pinterest LinkedIn Tumblr


ಜೈಪುರ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಮೊಘಲ್ ಸಾಮ್ರಾಟ ಔರಂಗಜೇಬನಿಗೆ ಹೋಲಿಸುವುದರ ಮೂಲಕ ರಾಜಸ್ಥಾನ ಬಿಜೆಪಿ ಉಪಾಧ್ಯಕ್ಷ ಜ್ಞಾನ ದೇವ್ ಅಹುಜಾ ಹೊಸ ವಿವಾದ ಸೃಷ್ಟಿಸಿದ್ದಾರೆ. ಔರಂಗಜೇಬ್ ಕೊನೆಯ ಮೊಘಲ್ ಸಾಮ್ರಾಟನಾಗಿದ್ದಂತೆ ರಾಹುಲ್ ಕೂಡ ಕಾಂಗ್ರೆಸ್ ಪಕ್ಷದ ಕೊನೆಯ ಸಾಮ್ರಾಟ ಎಂದು ಅವರು ಹೇಳಿದ್ದಾರೆ.

ಔರಂಗಜೇಬ ಮೊಘಲ್ ಸಾಮ್ರಾಜ್ಯದ ಕೊನೆಯ ಬಾದ್‌ಶಾ ಆಗಿದ್ದಂತೆ ರಾಹುಲ್ ಕೂಡ ಕಾಂಗ್ರೆಸ್ ಸಾಮ್ರಾಜ್ಯದ ಕೊನೆಯ ಬಾದ್‌ಶಾ. ಕಾಂಗ್ರೆಸ್ ಅಂತ್ಯವಾಗುವುದು ನಿಶ್ಚಿತ ಎಂದಿದ್ದಾರೆ ಅಹುಜಾ.

ಕಾಂಗ್ರೆಸ್ ಗೋ ರಕ್ಷಣೆ ವಿಷಯವನ್ನು ಹೈಜಾಕ್ ಮಾಡಿಕೊಳ್ಳಲು ಹವಣಿಸುತ್ತಿದೆ ಎಂದು ಆರೋಪಿಸಿದ ಅವರು ರಾಹುಲ್ ಗಾಂಧಿಯ ಜನಿವಾರ ಸಂಸ್ಕಾರವನ್ನು ಸಹ ಪ್ರಶ್ನಿಸಿದರು. ಕಾಂಗ್ರೆಸ್‌ಗೆ ಧೈರ್ಯವಿದ್ದರೆ ರಾಹುಲ್‌ಗೆ ಜನಿವಾರ ಸಂಸ್ಕಾರ ಮಾಡಿದ ಅರ್ಚಕರು ಯಾರು ಎಂಬುದನ್ನು ಬಹಿರಂಗ ಪಡಿಸಲಿ ಎಂದು ಸವಾಲೆಸೆದರು.

ನಮ್ಮ ಪಕ್ಷ ರಾಮಗಢ ಉಪಚುನಾವಣೆಯನ್ನು ಗೆಲ್ಲಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಜ್ಞಾನದೇವ್ ಈ ಹಿಂದೆ ಗೋ ರಕ್ಷಕರ ಪರ ಮಾತನಾಡಿ ವಿವಾದಕ್ಕೀಡಾಗಿದ್ದರು. ಗೋ ಹತ್ಯೆ ಆತಂಕವಾದಕ್ಕಿಂತ ದೊಡ್ಡ ಅಪರಾಧ. ಭಯೋತ್ಪಾದಕ 2- ಜನರ ಹತ್ಯೆ ಮಾಡುತ್ತಾನೆ. ಆದರೆ ಒಂದು ಆಕಳನ್ನು ಹತ್ಯೆ ಮಾಡಿದರೆ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆ ಎಂದು ಅವರು ಹೇಳಿದ್ದರು.

Comments are closed.