ರಾಷ್ಟ್ರೀಯ

ಕಿಡ್ನಿಗಳು ಹಾನಿಯಾಗಿವೆ, ಇದು ನನಗೆ ಕೊನೆ ಚುನಾವಣೆ: ಓವೈಸಿ

Pinterest LinkedIn Tumblr


ಹೈದರಾಬಾದ್: ನನ್ನ ಕಿಡ್ನಿಗಳು ಹಾನಿಗೊಂಡಿವೆ, ಹಿಂದಿನಂತೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ಬಹುಃಷ ಇದು ನನ್ನ ಕೊನೆಯ ಚುನಾವಣೆಯಾಗಿರಬಹುದು ಎಂದು ಎಐಎಂಐಎಂ ನಾಯಕ ಅಕ್ಬರುದ್ದೀನ್ ಓವೈಸಿ ಹೇಳಿದ್ದಾರೆ.

ಸದಾ ವಿವಾದ, ಕೋಮು ಸಾಮರಸ್ಯ ಹರಡುವ ಭಾಷಣಗಳಿಂದಲೇ ಪ್ರಸಿದ್ಧಿ ಪಡೆದಿರುವ ಅಕ್ಬರುದ್ದೀನ್, ಅಸಾದುದ್ದೀನ್ ಓವೈಸಿಯ ಸಹೋದರ. ಈ ಬಾರಿ ಚುನಾವಣೆಯಲ್ಲಿ ಚಂದ್ರಯಾನಗುಟ್ಟಾದಿಂದ ಎಐಎಂಐಎಂ ಅಭ್ಯರ್ಥಿಯಾಗಿರುವ ಅಕ್ಬರುದ್ದೀನ್, ಚುನಾವಣಾ ಪ್ರಚಾರ, ಸಮಾವೇಶದಲ್ಲಿ ಹಿಂದಿನಂತೆ ಭಾಷಣ ಮಾಡುತ್ತಿಲ್ಲ. ಅಲ್ಲದೆ ಬಿರುಸಿನಿಂದಲೂ ಭಾಗವಹಿಸುತ್ತಿಲ್ಲ. ಇದಕ್ಕೆ ಕಾರಣ ಅನಾರೋಗ್ಯ ಎನ್ನುವುದು ಈಗ ಬಯಲಾಗಿದೆ.

ಯಕೂತ್‌ಪುರದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅಕ್ಬರುದ್ದೀನ್, ನನ್ನ ಕಿಡ್ನಿಗಳು ಹಾನಿಯಾಗಿದ್ದು, ಬುಲೆಟ್‌ ಚೂರುಗಳು ಕಿಡ್ನಿಯ ಸಮೀಪದಲ್ಲಿವೆ. ಡಯಾಲಿಸೀಸ್ ಮಾಡಿಸಿಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ ಎಂದಿದ್ದಾರೆ.

ಈಗ ನನ್ನ ಶಾಲೆಗಳು, ದಾರುಸ್ಸಲಾಂ ಬ್ಯಾಂಕ್ ಮತ್ತು ಆಸ್ಪತ್ರೆಯ ಜತೆಗೆ ನನ್ನ ಆರೋಗ್ಯವನ್ನೂ ನೋಡಿಕೊಳ್ಳಬೇಕಿದೆ. ನನಗೆ ಈಗ ನನಗಾಗಿ ಸಮಯ ಬೇಕಿದೆ ಎಂದಿದ್ದಾರೆ.

2011ರ ಏಪ್ರಿಲ್ 30ರಂದು ಅಕ್ಬರುದ್ದೀನ್ ಓವೈಸಿ ಮೇಲೆ ಅಪರಿಚಿತರು ಚೂರಿಯಿಂದ ದಾಳಿ ನಡೆಸಿದ್ದರು. ನಂತರ ಗುಂಡಿನ ದಾಳಿ ನಡೆಸಿದ್ದರು.

Comments are closed.