ಲಕ್ನೋ: ಹೊಸ ವರ್ಷ 2019ರ ಆರಂಭದಲ್ಲಿ ಜನವರಿ ಮತ್ತು ಮಾರ್ಚ್ ವೇಳೆ ಮದುವೆಯಾಗಬೇಕು ಎಂದು ಕನಸುಕಾಣುತ್ತಿದ್ದ ಪ್ರಯಾಗ್ರಾಜ್ನ ಜನರಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಶಾಕ್ ನೀಡಿದ್ದಾರೆ.
ಪ್ರಯಾಗರಾಜ್ನಲ್ಲಿ ಜನವರಿ ಹಾಗೂ ಮಾರ್ಚ್ ನಡುವೆ ಮದುವೆ ನಿಶ್ಚಯ ಮಾಡಿಕೊಂಡಿದ್ದರೆ ಅದನ್ನು ಮುಂದೂಡಿ ಅಥವಾ ನಿಮ್ಮ ಮದುವೆ ಸ್ಥಳವನ್ನು ಬದಲಾಯಿಸಿಕೊಳ್ಳಿ ಎಂದಿದ್ದಾರೆ. ಇದಕ್ಕೆ ಕಾರಣ ಕುಂಭಮೇಳ.
ಮದುವೆ ನಿಶ್ಚಯಿಸಿಕೊಂಡಿರುವ ಕುಟುಂಬಸ್ಥರು ಈಗಾಗಲೇ ಅತಿಥಿ ಗೃಹಗಳಿಗೆ ಮುಂಗಡ ಹಣ ಪಾವತಿ ಮಾಡಿ ಬುಕಿಂಗ್ ಮಾಡಿಕೊಂಡಿದ್ದಾರೆ. ಈಗ ಸರ್ಕಾರದ ಈ ಹೊಸ ನಿಯಮದಿಂದಾಗಿ ಅನೇಕ ಜನರು ಮದುವೆ ದಿನಾಂಕವನ್ನು ಮುಂದೂಡಿಸಿದ್ದು, ಕೆಲವರು ಸಮೀಪದ ಜಿಲ್ಲೆಯ ಸ್ಥಳಗಳಿಗೆ ಬದಲಿಸಿಕೊಂಡಿದ್ದಾರೆ. ಮದುವೆ ಸುಗ್ಗಿ ಸಮಯದಲ್ಲಿ ಸರ್ಕಾರದ ಈ ನಿರ್ಣಯ ಅನೇಕ ವ್ಯವಹಾರಗಳ ಮೇಲೂ ಪರಿಣಾಮ ಬೀರಿದೆ.
ಕುಂಭ ಸ್ನಾನಕ್ಕೆ ಒಂದು ದಿನ ಮುಂಚಿತವಾಗಿ ಯಾವುದೇ ಮದುವೆ ಕಾರ್ಯವನ್ನು ನಡೆಸುವಂತಿಲ್ಲ ಎಂದು ಸರ್ಕಾರದಿಂದ ಜಿಲ್ಲಾಧಿಕಾರಿಗಳಿಗೂ ಆದೇಶ ರವಾನೆಯಾಗಿದೆ, ಈ ಹಿನ್ನಲೆಯಲ್ಲಿ ಹಲವರು ಈಗಾಗಲೇ ಬುಕ್ಕಿಂಗ್ ರದ್ದುಗೊಳಿಸಿದ್ದಾರೆ.
ಜನವರಿಯಲ್ಲಿ ಮಕರ ಸಂಕ್ರಾತಿ ಹಾಗೂ ಪುಷ್ಯ ಪೂರ್ಣಿಮಾದಂದು ಪವಿತ್ರ ಸ್ನಾನವನ್ನು ಇಲ್ಲಿ ನಡೆಸಲಾಗುತ್ತದೆ. ಫೆಬ್ರವರಿಯಲ್ಲಿ ಮೌನಿ ಅಮವಾಸ್ಯೆ, ಬಸಂತ್ ಪಂಚಮಿ ಹಾಗೂ ಮಗಾಯಿ ಪೂರ್ಣಿಮ ಇನ್ನು ಮಾರ್ಚ್ನಲ್ಲಿ ಮಹಾಶಿವರಾತ್ರಿಯಂದು ಪವಿತ್ರ ಸ್ನಾನವನ್ನು ಜನರು ಮಾಡುತ್ತಾರೆ, ಈ ಪವಿತ್ರ ಆಚರಣೆಗಾಗಿ ಅನೇಕ ಭಕ್ತರು ಇಲ್ಲಿಗೆ ಆಗಮಿಸಿ, ಸ್ನಾನ ಕೈಗೊಳ್ಳುತ್ತಾರೆ.
Comments are closed.