ರಾಷ್ಟ್ರೀಯ

ರಾಮ ಮಂದಿರಕ್ಕಾಗಿ ಸುಪ್ರೀಂ ಶೀಘ್ರ ತೀರ್ಪು ನೀಡಲಿ: ಮೋಹನ್​ ಭಾಗವತ್​

Pinterest LinkedIn Tumblr


ನಾಗ್ಪುರ: ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ವಿಚಾರದಲ್ಲಿ ಎದುರಾಗಿರುವ ವಿವಾದಕ್ಕೆ ಸುಪ್ರೀಂ ಕೋರ್ಟ್​ ಪ್ರಾಮುಖ್ಯತೆ ನೀಡುತ್ತಿಲ್ಲ. ನ್ಯಾಯದಾನ ವಿಳಂಬವೆಂದರೆ ನ್ಯಾಯ ನಿರಾಕರಣೆ ಎಂದೇ ಅರ್ಥ ಎಂದು ಆರ್​ಎಸ್​ನ ಮುಖ್ಯಸ್ಥ ಮೋಹನ್​ ಭಾಗವತ್​ ಹೇಳಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ಆಯೋಜಿಸಿರುವ ಜನಾಗ್ರಹ ಸಭೆಯಲ್ಲಿ ಮಾತನಾಡಿರುವ ಅವರು, ” ರಾಮ ಮಂದಿರ ನಿರ್ಮಾಣದ ಬೇಡಿಕೆ ಕಳೆದ 30 ವರ್ಷಗಳಿಂದಲೂ ನನೆಗುದಿಗೆ ಬಿದ್ದಿದೆ. ಸುಪ್ರೀಂ ಕೋರ್ಟ್​ ಈ ವಿವಾದದಲ್ಲಿ ಶೀಘ್ರವೇ ತೀರ್ಪು ಪ್ರಕಟಿಸಬೇಕು,” ಎಂದು ಅವರು ಒತ್ತಾಯಿಸಿದರು.

” ವಿವಾದಿತ ಸ್ಥಳದಲ್ಲಿ ರಾಮನ ಮಂದಿರ ಇತ್ತು ಎಂಬುದು ಸಾಬೀತಾಗಿದೆ. ವಿವಾದ ಕೋರ್ಟ್​ನಲ್ಲಿದೆ. ಕೋರ್ಟ್​ ಬೇಗ ತೀರ್ಪು ನೀಡಬೇಕಿದೆ,” ಎಂದೂ ಅವರು ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ರಾಜ್ಯದ ಉಡುಪಿ, ಹುಬ್ಬಳ್ಳಿ, ಗದಗ ಸೇರಿದಂತೆ ದೇಶದ ವಿವಿಧೆಡೆ ಜನಾಗ್ರಹ ಸಭೆಗಳು ನಡೆಯುತ್ತಿವೆ. ಇದೇ ವೇಳೆ ಆಯೋಧ್ಯೆಯೆಯಲ್ಲಿ ಧರ್ಮ ಸಂಸದ್​ ಪರಿಷತ್​ ಸಭೆಯೂ ನಡೆಯುತ್ತಿದೆ.

ರಾಮ ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂಬುದು ಈ ಸಭೆಗಳ ಆಗ್ರಹವಾಗಿದೆ. ಇದಕ್ಕಾಗಿ ಕಾನೂನು, ಸುಗ್ರೀವಾಜ್ಞೆ ಜಾರಿಗೆ ತರಬೇಕು ಎಂಬುದು ಸಾಧು ಸಂತರು, ಹಿಂದು ಸಂಘಟನೆಗಳ ಒತ್ತಾಯವಾಗಿದೆ.

Comments are closed.