ರಾಷ್ಟ್ರೀಯ

ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ದೇಶಾದ್ಯಂತ ತೀರ್ಥಯಾತ್ರೆ

Pinterest LinkedIn Tumblr


ತಿರುಮಲ: ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ದೇಶಾದ್ಯಂತ ತೀರ್ಥಯಾತ್ರೆ ಕೈಗೊಂಡಿದ್ದಾರೆ. ಈ ಹಿನ್ನೆಲೆ, ಇಂದು ಬೆಳಗ್ಗಿನ ಜಾವ ಆಂಧ್ರ ಪ್ರದೇಶದಲ್ಲಿರುವ ತಿರುಪತಿಗೆ ತೆರಳಿದ್ದ ವಾದ್ರಾ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ.

ತಿರುಮಲದಲ್ಲಿರುವ ವೆಂಕಟೇಶ್ವರನ ಸನ್ನಿಧಾನಕ್ಕೆ ತೆರಳಿದ್ದ ಪ್ರಿಯಾಂಕಾ ಗಾಂಧಿ ಪತಿ, ದರ್ಶನದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ್ದು, ‘ನನ್ನ ಕುಟುಂಬದ ಯೋಗಕ್ಷೇಮಕ್ಕಾಗಿ ಹಾಗೂ ಅತ್ತೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಗ್ಯ ಚೆನ್ನಾಗಿರಲೆಂದು ಪ್ರಾರ್ಥನೆ ಮಾಡಿದೆ’ ಎಂದು ಹೇಳಿದ್ದಾರೆ.
robert vadra
ತೀರ್ಥಯಾತ್ರೆ ಆರಂಭಿಸಿದ ರಾಬರ್ಟ್ ವಾದ್ರಾ: ವೆಂಕಟೇಶ್ವರನ ದರ್ಶನ ಪಡೆದ ಸೋನಿಯಾ ಅಳಿಯ

ಕೇಂದ್ರದಲ್ಲಿ ಸರಕಾರ ಬದಲಾಗಲೆಂದು ದೇಶದ ಜನತೆ ಬೇಡಿಕೊಳ್ಳುತ್ತಿದ್ದಾರೆ. ಅಲ್ಲದೆ, 2019ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಶ್ರಮಿಸುತ್ತಿದ್ದಾರೆ ಎಂದು ಮಾಧ್ಯಮದವರಿಗೆ ವಾದ್ರಾ ಹೇಳಿದ್ದಾರೆ . ಇನ್ನೊಂದೆಡೆ, ತಾವು ಭಾರತದಾದ್ಯಂತ ತೀರ್ಥಯಾತ್ರೆ ಕೈಗೊಂಡಿರುವುದಾಗಿಯೂ ಮಾಹಿತಿ ನೀಡಿದ್ದಾರೆ.

Comments are closed.