ರಾಷ್ಟ್ರೀಯ

ಸಲಿಂಗ ಸಂಗ ವಿರೋಧಿಸದಿರುವ ನಿರ್ಧಾರ: ಕಾನೂನು ಸಚಿವ ರವಿ ಶಂಕರ್ ಪ್ರಸಾದ್

Pinterest LinkedIn Tumblr


ಹೊಸದಿಲ್ಲಿ: ಸಲಿಂಗ ಸಂಗ ಶಿಕ್ಷಾರ್ಹ ಅಪರಾಧ ಎನ್ನುವ ಸೆಕ್ಷನ್ 377ರ ರದ್ದತಿಯನ್ನು ವಿರೋಧಿಸದಿರುವ ನಿರ್ಧಾರ ಕೈಗೊಂಡಿರುವ ಸರಕಾರದ ನಿಲುವಿನ ಪರವಾಗಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಅವರು, ‘ಬದಲಾಗುತ್ತಿರುವ ಸಾಮಾಜಿಕ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತಳೆದಿದ್ದೇವೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾದ ರಾಜೀವ್ ದೇಶಪಾಂಡೆ ಹಾಗೂ ಸಿದ್ದಾರ್ಥ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

ಲೈಂಗಿಕ ಆದ್ಯತೆ ವೈಯಕ್ತಿಕ ಆಯ್ಕೆಯಾಗಿರಬಹುದು? ಹಾಗಿರುವಾಗ ಅದನ್ನು ಅಪರಾಧದ ವ್ಯಾಪ್ತಿಯಿಂದ ಏಕೆ ಹೊರಗಿಡಬಾರದು? ಸಲಿಂಗ ಮದುವೆಯಂತಹ ವಿಷಯಗಳು ಇಲ್ಲಿ ಪ್ರತ್ಯೇಕವಾಗಿ ನಿಲ್ಲುತ್ತವೆ. ಭಾರತ ಈಗ ಜಾಗತಿಕ ಶಕ್ತಿಯಾಗಿ ಬೆಳೆದು ನಿಂತಿದೆ. ದೇಶದ ಆರ್ಥಿಕತೆಯು ಪ್ರಗತಿಪಥದತ್ತ ಸಾಗಿದೆ. ಆದ್ದರಿಂದ ಸಾಮಾಜಿಕವಾಗಿಯೂ ಕೂಡ ವೇಗ ಕಾಯ್ದುಕೊಳ್ಳಬೇಕು. ಇದು ಸಂಪೂರ್ಣವಾಗಿ ವ್ಯಕ್ತಿಯ ಇಷ್ಟಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ಇದು ಭಾರತೀಯರ ವಿಚಾರಧಾರೆ ಬದಲಾಗುತ್ತಿರುವುದನ್ನು ತೋರಿಸುತ್ತದೆ.

ಸಲಿಂಗ ಸಂಗವನ್ನು ಅಪರಾಧದ ವ್ಯಾಪ್ತಿಯಿಂದ ಹೊರಗಿಡಬೇಕೇ ಅಥವಾ ಬೇಡವೇ? ಎಂಬುದರ ಕುರಿತು ನಿರ್ಧಾರ ತೆಗೆದುಕೊಳ್ಳುವ ವಿವೇಚನೆಯನ್ನು ಈ ಹಿಂದೆ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಬಿಟ್ಟುಕೊಟ್ಟಿತ್ತು. ಪ್ರಕರಣದ ವಿಚಾರಣೆ ವೇಳೆ ಕೇಂದ್ರ ಈ ಕುರಿತು ಯಾವುದೇ ನಿಲುವನ್ನು ತಾಳಿರಲಿಲ್ಲ.

ತ್ರಿವಳಿ ತಲಾಖ್ ನಿಷೇಧ ಹಾಗೂ ಇದನ್ನು ಶಿಕ್ಷಾರ್ಹಗೊಳಿಸುವ ವಿಧೇಯಕವನ್ನು ಅಂಗೀಕರಿಸುವ ಬಗ್ಗೆ ಭರವಸೆ ಹೊಂದಿದ್ದೀರಾ?

ಸುಮಾರು 30 ವರ್ಷಗಳ ಹಿಂದೆ, ವಿಚ್ಛೇದಿತ ಮುಸ್ಲಿಂ ಮಹಿಳೆ ಷಾ ಬಾನು ಪ್ರಕರಣಕ್ಕೆ ಸಂಬಂಧಿದಂತೆ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಸಂತ್ರಸ್ತೆಗೆ ಪರಿಹಾರ ನೀಡಬೇಕೆಂದು ಆದೇಶ ನೀಡಿತ್ತು. ಆದರೆ, ಆಕೆಯ ಪತಿ 200 ರೂಪಾಯಿ ಪರಿಹಾರ ನೀಡಲು ಸಹ ಒಪ್ಪಿರಲಿಲ್ಲ. ಅಂದು ಈ ಬಗ್ಗೆ ಯಾರೊಬ್ಬರೂ ಧ್ವನಿ ಎತ್ತಿರಲಿಲ್ಲ. ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಅವರು ಸಹ ತ್ರಿವಳಿ ತಲಾಖ್ ವಿರುದ್ಧ ನಿಂತಿದ್ದ ಆರಿಫ್ ಮೊಹಮ್ಮದ್ ಖಾನ್ ಅವರಂತವರ ಪ್ರಗತಿಪರ ವಿಚಾರಧಾರೆಯನ್ನು ಬೆಂಬಲಿಸಲಿಲ್ಲ. ಮತ್ತೀಗ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ಅಸಾಂವಿಧಾನಿಕ ಎಂದು ಘೋಷಿಸಿದೆ. ತಲಾಖ್ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿರ್ಧಾರ ಸಮಾಜದಲ್ಲಿ ಬಹುದೊಡ್ಡ ಬದಲಾವಣೆ ತರಲಿದೆ. ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರು ಈ ಪದ್ಧತಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಸದ್ಯ, ನಿಖಾ ಹಲಾಲಾ ವಿವಾದ ನ್ಯಾಯಾಲಯದಲ್ಲಿದ್ದು, ಹಲಾಲಾ ಹಾಗೂ ತ್ರಿವಳಿ ತಲಾಖ್‌ನಂಥ ಪದ್ಧತಿಗಳಲ್ಲಿ ಕೆಲವು ಸಾಮಾನ್ಯ ಅಂಶಗಳು ಅಡಗಿವೆ. ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ಟುನಿಷಿಯಾ ಮತ್ತು ಮಲೇಶಿಯಾ ಸೇರಿದಂತೆ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಈ ಪದ್ದತಿ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಜಾತ್ಯತೀತರೆಂದು ಕರೆಯಲ್ಪಡುವವರು ಈ ಸತ್ಯವನ್ನು ಎಂದಿಗೂ ವಿರೋಧಿಸಲಾರರು.

Comments are closed.