ರಾಷ್ಟ್ರೀಯ

ಮುಸ್ಲಿಂ ಯುವಕನಿಗೆ ರಕ್ತ ನೀಡಿದ್ದರೂ ಗಲಭೆಗೆ ಬಲಿಯಾದ ಚಂದನ್‌

Pinterest LinkedIn Tumblr


ಲಖನೌ: ಗಣರಾಜ್ಯೋತ್ಸವ ದಿನದಂದು ನಡೆದ ಮೆರವಣಿಗೆಯ ವೇಳೆ ಹತ್ಯೆಗೀಡಾಗಿದ್ದ ಚಂದನ್‌ ಗುಪ್ತಾ, ಸಾಯುವ ಕೆಲದಿನಗಳ ಹಿಂದೆಯಷ್ಟೇ ಮುಸ್ಲಿಂ ಯುವಕನಿಗೆ ರಕ್ತ ದಾನ ಮಾಡಿದ್ದರು ಎಂದು ಆತನ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಕಾಸ್‌ಗಂಜ್‌ನಲ್ಲಿ ನಡೆದ ಸಂಘರ್ಷದಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಚಂದನ್ ಶರ್ಮಾ ಬಲಿಯಾದ ಬಳಿಕ ಆತನನ್ನು ಹುತಾತ್ಮನೆಂದು ಘೋಷಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದರು. ಭಾರತಾಂಬೆಯ ಗೌರವ ಉಳಿಸುವ ಕೆಲಸದಲ್ಲಿದ್ದಾಗಲೇ ಹುತಾತ್ಮನಾಗಿದ್ದಾನೆ. ಆತನ ಸಾವನ್ನು ಮುಖ್ಯಮಂತ್ರಿ ಗೌರವಿಸಿ ಹುತಾತ್ಮ ಎಂದು ಘೋಷಿಸದೆ ಹೋದರೆ ಮುಂದೆ ಯಾವ ತಾಯಿ ಕೂಡ ತನ್ನ ಮಗನನ್ನು ಭಾರತದ ಧ್ವಜ ಎತ್ತಿ ಹಿಡಿಯುವ ಸೇವೆಗೆ ಕಳಿಸಲಾರಳು ಎಂದು ಅವರ ಸಹೋದರಿ ಕೀರ್ತಿ ಮೂರು ಪುಟಗಳ ಪತ್ರ ಬರೆದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ರವಾನಿಸಿದ್ದಾರೆ.

‘ಚಂದನ್ ಶರ್ಮಾ ಅವರು ಸಾಯುವ ಕೆಲದಿನಗಳ ಹಿಂದೆಯಷ್ಟೇ ಮುಸ್ಲಿಂ ಯುವಕನೊಬ್ಬನಿಗೆ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದರು. ನನ್ನ ಸಹೋದರ ಬಡ ಜನರಿಗೆ ಸಹಾಯ ಹಸ್ತ ನೀಡುತ್ತಿದ್ದರು. ತಪ್ಪು ದಾರಿಯಲ್ಲಿ ಸಾಗುವವರನ್ನು ಸರಿ ದಾರಿಗೆ ತರಲು ಪ್ರಯತ್ನಿಸುತ್ತಿದ್ದರು. ಭಾರತದಲ್ಲಿ ‘ವಂದೇ ಮಾತರಂ’ ಹಾಗೂ ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗುವುದೇ ತಪ್ಪು ಎನ್ನುವುದಾದರೆ, ನನ್ನ ಸಹೋದರನನ್ನು ದೋಷಿಯೆಂದು ಘೋಷಿಸಿ’ ಎಂದು ಚಂದನ್ ಸೋದರ ಅಳಲು ತೋಡಿಕೊಂಡಿದ್ದಾರೆ.

ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಗಣರಾಜೋತ್ಸವದಂದು ‘ತಿರಂಗಾ ಜಾಥಾ’ ವಿಚಾರವಾಗಿ ನಡೆದ ಎರಡು ಗಂಪುಗಳ ಘರ್ಷಣೆಯಲ್ಲಿ ಚಂದನ್ ಗುಪ್ತಾ ಅವರ ಕೊಲೆ ನಡೆದಿತ್ತು.

Comments are closed.