ರಾಷ್ಟ್ರೀಯ

ಎಚ್‌ಎಂಕೆ ನಾಯಕನ ಮನೆಗೆ ಪೆಟ್ರೋಲ್‌ ಬಾಂಬ್‌ ಎಸೆತ

Pinterest LinkedIn Tumblr


ಶಿವಗಂಗಾ, ತಮಿಳುನಾಡು: ಹಿಂದೂ ಸಂಘಟನೆಯೊಂದರ ನಾಯಕನ ಮನೆಯ ಮೇಲೆ ಇಂದು ಅಪರಿಚಿತ ದುಷ್ಕರ್ಮಿಗಳು 3 ಪೆಟ್ರೋಲ್‌ ಬಾಂಬ್‌ ಎಸೆದ ಪರಿಣಾಮವಾಗಿ ಹೊರಗೆ ಪಾಕ್‌ ಮಾಡಲ್ಪಟ್ಟಿದ್ದ ಕೆಲವು ವಾಹನಗಳು ಹಾನಿಗೀಡಾದವು.

ಹಿಂದೂ ಮಕ್ಕಳ್‌ ಕಚ್ಚಿ ಎಂಬ ಸಂಘಟನೆಯ ದಕ್ಷಿಣ ವಯಲದ ಸಂಘಟನಾ ಅಧ್ಯಕ್ಷ ಬಾಲಮುರುಗನ್‌ ಅವರ ನಿವಾಸದ ಮೇಲೆ ಬೈಕ್‌ನಲ್ಲಿ ಬಂದಿದ್ದ ಮೂವರು ಅಪರಿಚಿತ ದುಷ್ಕರ್ಮಿಗಳು ಪೆಟ್ರೋಲ್‌ ಬಾಂಬ್‌ ಎಸೆದು ಪರಾರಿಯಾದರು; ಯಾರೂ ಗಾಯಗೊಂಡ ವರದಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ದುಷ್ಕೃತ್ಯ ನಡೆದ ವೇಳೆ ಬಾಲಮುರುಗನ್‌ ಅವರು ಮನೆಯಲ್ಲಿ ಇರಲಿಲ್ಲ; ಆದರೆ ಮನೆಯವರು ಇದ್ದರು. ಯಾರಿಗೂ ಏನೂ ಆಗಿಲ್ಲ; ಈ ಘಟನೆಯು ಸಿಸಿಟಿವಿಯಲ್ಲಿ ದಾಖಲಾಗಿದ್ದು ಅದನ್ನೀಗ ಪರಿಶೀಲಿಸಲಾಗುತ್ತಿದೆ ಎಂದು ಡಿವೈಎಸ್ಪಿ ಶಂಕರ್‌ ಅವರು ಸ್ಥಳಕ್ಕೆ ಭೇಟಿ ನೀಡಿದ ಮಾಧ್ಯಮಕ್ಕೆ ತಿಳಿಸಿದ್ದಾರೆ.

-ಉದಯವಾಣಿ

Comments are closed.