ರಾಷ್ಟ್ರೀಯ

ಚುನಾವಣೆ ಪ್ರಚಾರವನ್ನೂ ಬಿಟ್ಟು ಓಡಿದ ರಾಹುಲ್! ಕಾರಣವೇನು ಗೊತ್ತಾ?!

Pinterest LinkedIn Tumblr


ಅಹಮ್ಮದಾಬಾದ್: ಗುಜರಾತ್ ಚುನಾವಣೆ ಪ್ರಚಾರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಚಾರವನ್ನೂ ಬಿಟ್ಟು ಬೀದಿ ಬದಿಯ ರೆಸ್ಟೋರೆಂಟ್ ಗೆ ಓಡಿದ್ದಾರೆ.

ಪ್ರಚಾರ ಮುಗಿಸಿ ದಾರಿಯಲ್ಲಿ ಬರುತ್ತಿರುವಾಗ ಕಾಂಗ್ರೆಸ್ ಯುವರಾಜ್ ಪಾವ್ ಬಾಜಿ ಸೆಂಟರ್ ನೋಡಿ ಬಾಯಲ್ಲಿ ನೀರೂರಿಸಿಕೊಂಡು ತಮ್ಮ ಸಂಗಡಿಗರ ಜತೆಗೆ ಬೀದಿ ಬದಿ ಅಂಗಡಿಗೆ ನುಗ್ಗಿದ್ದಾರೆ.

ಅಷ್ಟೇ ಅಲ್ಲ, ಮನಸೋ ಇಚ್ಛೆ ಗುಜರಾತ್ ಸ್ಪೆಷಲ್ ಪಾವ್ ಬಾಜಿ ಸವಿದಿದ್ದಾರೆ. ಇತ್ತೀಚೆಗಷ್ಟೇ ರಾಹುಲ್, ನಾನು ಈಗೀಗ ಗುಜರಾತ್ ಆಹಾರ ಪ್ರಿಯನಾಗುತ್ತಿದ್ದಾನೆ. ಇದರಿಂದಾಗಿ ದಿನೇ ದಿನೇ ತೂಕ ಹೆಚ್ಚಿಸಿಕೊಳ್ಳುತ್ತಿದ್ದೇನೆ ಎಂದು ತಮಾಷೆಯಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Comments are closed.