ಶ್ರೀನಗರ: ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕೇರಾನ್ ವಲಯದಲ್ಲಿ ಇಂದು ಬುಧವಾರ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದಿದ್ದ ಗುಂಡಿನ ಕಾಳಗದಲ್ಲಿ ಓರ್ವ ಯೋಧ ಹುತಾತ್ಮನಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಗಡಿ ನಿಯಂತ್ರಣ ರೇಖೆ ಸಮೀಪದ ಕೇರಾನ್ವಲಯದಲ್ಲಿನ ಚೋಕೇನ್ ಹೊರಠಾಣೆಯಲ್ಲಿ ಉಗ್ರರೊಂದಿಗೆ ಭದ್ರತಾ ಪಡೆಗಳ ಗುಂಡಿನ ಕಾಳಗ ಇಂದು ಬುಧವಾರ ಬೆಳಗ್ಗೆ 7.30ಕ್ಕೆ ನಡೆಯಿತು. ಎರಡೂ ಕಡೆಯಿಂದ ನಡೆದ ಅವಿರತ ಗುಂಡಿನ ಚಕಮಕಿಯಲ್ಲಿ ಯೋಧನೋರ್ವ ಹುತಾತ್ಮನಾದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಪಡೆಗಳ ಎನ್ಕೌಂಟರ್ ಕಾರ್ಯಾಚರಣೆ ಈ ಹೊತ್ತಿಗೂ ಮುಂದುವರಿದಿದೆ ಎಂದು ವರದಿಗಳು ತಿಳಿಸಿವೆ.
-ಉದಯವಾಣಿ
Comments are closed.