ರಾಷ್ಟ್ರೀಯ

ಶಾಲಾ ಚೀಲದೊಳಗೆ ಬುಸುಗುಟ್ಟಿದ ನಾಗರಹಾವು

Pinterest LinkedIn Tumblr


ಹೈದರಾಬಾದ್‌: ಆಂಧ್ರಪ್ರದೇಶದ ಜಗಿತ್ಯಾಲ ಜಿಲ್ಲೆಯ ಲಂಬಡಿಪಳ್ಳಿ ಶಾಲೆಯ 8ನೇ ತರಗತಿಯ ಬ್ಯಾಗಿನಿಂದ ಇದ್ದಕ್ಕಿದ್ದಂತೆ ನಾಗರಹಾವೊಂದು ಬುಸುಗುಟ್ಟುತ್ತ ಹೊರಬಂದ ಪ್ರಕರಣ ವರದಿಯಾಗಿದೆ. ಬಾಲಕ ಪ್ರವೀಣ್‌ ಎಂದಿನಂತೆ ಅಂದೂ ಸಹ ಶಾಲೆಯಲ್ಲಿ ಕುಳಿತು ಪಾಠ ಕೇಳುತ್ತಿದ್ದಾಗಲೇ ಈ ಘಟನೆ ನಡೆದಿದ್ದು, ತರಗತಿಯಲ್ಲಿ ಸ್ವಲ್ಪ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾಯಿತು.

ಹೋಮ್‌ ವರ್ಕ್‌ ಪುಸ್ತಕವನ್ನು ಹೊರತೆಗೆಯಲು ಪ್ರವೀಣ್‌ ಬ್ಯಾಗಿಗೆ ಕೈ ಹಾಕಿದಾಗ ಮೃದುವಾದ ಏನೋ ವಸ್ತು ಕೈಗೆ ತಾಗಿದಂತಾಯಿತು. ಅದನ್ನು ಹೊರತೆಗೆದು ನೋಡಿದಾಗ ಅದೊಂದು ನಾಗರಹಾವು ಎಂಬುದು ಗೊತ್ತಾಯಿತು. ತಕ್ಷಣ ಭಯದಿಂದ ಆತ ಕಿರುಚಿದಾಗ ಇಡೀ ತರಗತಿಯ ಗಮನ ಅತ್ತ ಹರಿಯಿತು. ಹಾವನ್ನು ನೋಡಿದ್ದೇ ತಡ, ತರಗತಿಯಲ್ಲಿದ್ದ ಶಿಕ್ಷಕರು, ವಿದ್ಯಾರ್ಥಿಗಳು ಹೊರಗೋಡಿದರು.

ಈ ಹಾವು ಬಾಲಕನ ಮನೆಯಲ್ಲೇ ಚೀಲದೊಳಗೆ ಸೇರಿಕೊಂಡಿರಬಹುದು ಎಂದು ನಂಬಲಾಗಿದೆ. ಪ್ರವೀಣ್‌ನ ಮನೆಯ ಸುತ್ತ ಸಾಕಷ್ಟು ಗಿಡಮರಗಳು, ಪೊದೆಗಳು ಇದ್ದು ಅಲ್ಲಿಂದಲೇ ಹಾವು ಚೀಲದೊಳಗೆ ಸೇರಿಕೊಂಡಿರಬಹುದು ಎಂದು ಸುತ್ತಮುತ್ತಲಿನವರು ಹೇಳುತ್ತಾರೆ.

ನಂತರ ಹಾವು ನಿಧಾನವಾಗಿ ಅಲ್ಲಿಂದ ಹೊರಕ್ಕೆ ಹರಿದು ಕಾಡು ಸೇರಿಕೊಂಡಾಗ ಎಲ್ಲರಿಗೂ ಹೋದ ಜೀವ ಬಂದಂತಾಯಿತು.

ಮೂಲ ವರದಿ: ತೆಲುಗು ಸಮಯಂ

Comments are closed.