ಕರಾವಳಿ

ಪುತ್ತೂರಿನ ವ್ಯಕ್ತಿಯ ಶವ ತೊಕ್ಕೊಟ್ಟು ರೈಲ್ವೇ ಹಳಿ ಮೇಲೆ ಪತ್ತೆ – ರೈಲು ಢಿಕ್ಕಿ ಶಂಕೆ..?

Pinterest LinkedIn Tumblr

ತೊಕ್ಕೊಟ್ಟು, ನವೆಂಬರ್. 13: ತೊಕ್ಕೊಟ್ಟು ಸಮೀಪ ರೈಲ್ವೇ ಹಳಿ ಮೇಲೆ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ಇವರು ರೈಲು ಢಿಕ್ಕಿ ಹೊಡೆದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.

ಮೃತರನ್ನು ಪುತ್ತೂರು ಸಾಮೆತಡ್ಕ ನಿವಾಸಿ ಜೋಗಿ ಮೂಲ್ಯ ಎಂಬವರ ಪುತ್ರ ದಾಮೋದರ (41) ಎಂದು ಗುರುತಿಸಲಾಗಿದೆ.

ಮೊದಲಿಗೆ ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಯಾಗಿರಲಿಲ್ಲ. ಬಳಿಕ ಮೃತರ ಶರ್ಟ್ ಜೇಬಿನಲ್ಲಿ ಐಡಿ ಪತ್ತೆಯಾದ ಹಿನ್ನೆಲೆಯಲ್ಲಿ ಮೃತರನ್ನು ದಾಮೋದರ ಎಂದು ಗುರುತಿಸಲಾಗಿದೆ.

ಮೃತರು ಪುತ್ತೂರು ಮೂಲದವರಾಗಿದ್ದು, ತೊಕ್ಕೊಟ್ಟಿಗೆ ಯಾವ ಕಾರಣಕ್ಕಾಗಿ ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಇವರು ರೈಲು ಹಳಿ ದಾಟುತ್ತಿದ್ದಾಗ ರೈಲು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಬಳಿಕ ಸ್ಥಳದಲ್ಲೇ ಮೃತಪಟ್ಟಿರ ಬೇಕೆಂದು ಸ್ಥಳೀಯರು ತಿಳಿಸಿದ್ದಾರೆ. ರೈಲ್ವೇ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಈ ಬಗ್ಗೆ ದೂರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments are closed.