ರಾಷ್ಟ್ರೀಯ

ರಾಮ ಮಂದಿರ ನಿರ್ಮಾಣಕ್ಕೆ ವಿಎಚ್‌ಪಿ ಕ್ರಿಯಾಯೋಜನೆ

Pinterest LinkedIn Tumblr


ಭುವನೇಶ್ವರ: ಅಯೋಧ್ಯೆಯಲ್ಲಿ 2018ರ ಒಳಗಾಗಿ ರಾಮ ಮಂದಿರ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸುವುದಾಗಿ ವಿಶ್ವ ಹಿಂದೂ ಪರಿಷತ್‌ ತಿಳಿಸಿದೆ.

ಪರಿಷತ್‌ನ ವಕ್ತಾರರಾದ ಸುರೇಂದ್ರ ಜೈನ್‌ ಅವರು ಗುರುವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

‘2018ರ ಒಳಗಾಗಿ ಮಂದಿರ ನಿರ್ಮಾಣಕ್ಕೆ ಅಗತ್ಯವಾದ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಾಗುವುದು. ಭುವನೇಶ್ವರದಲ್ಲಿ ಈ ತಿಂಗಳ 27ರಿಂದ ನಡೆಯಲಿರುವ ಮೂರು ದಿನಗಳ ವಿಎಚ್‌ಪಿ ಕೇಂದ್ರೀಯ ನಿರ್ವಹಣಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ,’ ಎಂದರು.

90ರ ದಶಕದಲ್ಲಿ ನಡೆದ ರಾಮಜನ್ಮಭೂಮಿ ಚಳವಳಿಯಲ್ಲೂ ವಿಎಚ್‌ಪಿ ಪ್ರಮುಖ ಪಾತ್ರ ವಹಿಸಿತ್ತು.

Comments are closed.