ಮನೋರಂಜನೆ

ಕನ್ನಡ ರಾಜ್ಯೋತ್ಸವಕ್ಕೆ ಶುಭ ಕೋರಿದ ಟ್ವೀಟ್‌ನಲ್ಲಿ ಕಾಗುಣಿತ ದೋಷ: ತಪ್ಪು ತಿದ್ದಿಕೊಂಡ ಕಿಚ್ಚ

Pinterest LinkedIn Tumblr

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಟ ಸುದೀಪ್‌ ಕನ್ನಡದಲ್ಲಿ ಮಾಡಿದ ಟ್ವೀಟ್‌ ಚರ್ಚೆಗೆ ಗ್ರಾಸವಾಯಿತು. ಕಾಗುಣಿತ ದೋಷವಿದ್ದ ಟ್ವಿಟರ್‌ ಸಂದೇಶ ಓದಿದ ಅಭಿಮಾನಿಗಳು ತಪ್ಪು ಸರಿ ಪಡಿಸುವಂತೆ ಮನವಿ ಮಾಡಿದರು.

ನಾಡಿನ ಅಭಿಮಾನಿಗಳು, ಸ್ನೇಹಿತರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಲು ಕಿಚ್ಚ ಸುದೀಪ್‌ ಮಾಡಿದ ಮೊದಲ ಟ್ವೀಟ್‌ ಟೈಪಿಂಗ್‌ ದೋಷದಿಂದ ಪದಗಳು ತಪ್ಪಾಗಿತ್ತು. ನಂತರ ಪ್ರಕಟಿಸಿದ ಟ್ವೀಟ್‌ನಲ್ಲಿಯೂ ಅಕ್ಷರಗಳು ತಪ್ಪಾಗಿದ್ದನ್ನು ಗಮನಿಸಿದ ಟ್ವೀಟಿಗರು ‘ದಯಮಾಡಿ ತಪ್ಪಾಗಿ ಕನ್ನಡ ಬರೆಯಬೇಡಿ’ ಎಂದು ಪ್ರತಿಕ್ರಿಯಿಸಿದ್ದರು.

ಇದರೊಂದಿಗೆ ಟ್ವೀಟಿಗರು ಸರಿ ಪಡಿಸಿದ ಸಂದೇಶವನ್ನೂ ಪ್ರಕಟಿಸಿದ್ದರು. ಪ್ರತಿಕ್ರಿಯೆಗಳನ್ನು ಗಮನಿಸಿರುವ ಸುದೀಪ್‌ ತಿದ್ದುಪಡಿ ಮಾಡಿದ ಸಂದೇಶವನ್ನು ಮತ್ತೆ ಪ್ರಕಟಿಸಿದ್ದು, ಟೈಪಿಸುವುದರಲ್ಲಿ ಉಂಟಾದ ತಪ್ಪಿಗೆ ಕ್ಷಮೆ ಕೋರಿದ್ದಾರೆ.

Comments are closed.