ರಾಷ್ಟ್ರೀಯ

ಕೃಷ್ಣಾರ್ಜುನರಾಗಿ ರಾಹುಲ್ ಗಾಂಧಿ, ಅಖಿಲೇಶ್!

Pinterest LinkedIn Tumblr


ವಾರಣಾಸಿ: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಪೂರ್ವಭಾವಿ ರಾಜಕೀಯ ಪ್ರಚಾರ ಪೌರಾಣಿಕ ರೂಪ ಪಡೆದುಕೊಂಡಿದ್ದು, ರಥವೇರಿದ ಅರ್ಜುನನಾಗಿ ಅಖಿಲೇಶ್‌ ಯಾದವ್‌, ಸಾರಥಿ ಕೃಷ್ಣನಾಗಿ ರಾಹುಲ್‌ ಗಾಂಧಿ ಕಾಣಿಸಿಕೊಂಡಿದ್ದಾರೆ.

ಹೌದು, ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ಅರ್ಜುನನ ವೇಷಧಾರಿಯಾಗಿದ್ದಾರೆ. ಅವರಿಗೆ ಸಾರಥಿಯಾಗಿ ಕೃಷ್ಣನ ವೇಷಧಾರಿಯಾಗಿರುವ ರಾಹುಲ್‌ ಗಾಂಧಿ ರಥದಲ್ಲಿ ಕುಳಿತಿರುವ ಭಿತ್ತಿಪತ್ರಗಳು ಎಲ್ಲೆಡೆ ರಾರಾಜಿಸುತ್ತಿವೆ.

ಚುನಾವಾಣಾ ಪೂರ್ವ ಮೈತ್ರಿ ಬಿಂಬಿಸುತ್ತಿರುವ ಪೋಸ್ಟರ್‌ಗಳು ಉತ್ತರ ಪ್ರದೇಶದ ಬೆನಿಯಾಬಾಗ್‌, ಚೇತ್‌ಗಂಜ್‌, ಹಾಗೂ ಇನ್ನಿತರ ಪ್ರದೇಶಗಳಲ್ಲಿ ಕಾಣಿಸುತ್ತಿವೆ.

ಈ ಭಿತ್ತಿಪತ್ರದಲ್ಲಿ ಸಮಾಜವಾದಿ ಪಕ್ಷದ ಚಿಹ್ನೆಯಾದ ಸೈಕಲ್‌ ಮತ್ತು ವಿಕಾಸದಿಂದ ವಿಜಯದೆಡೆಗೆ ಇಬ್ಬರು ಅತಿರಥರ ಪಯಣ ಎಂಬ ಬರಹ ಹೊಂದಿದೆ.

Comments are closed.