ರಾಷ್ಟ್ರೀಯ

ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ವೇಳೆ ಎದ್ದು ನಿಲ್ಲದ ಯುವಕರಿಗೆ ಹಲ್ಲೆ

Pinterest LinkedIn Tumblr

anthem-honour-finalಚೆನ್ನೈ: ನಿನ್ನೆ ಚೆನ್ನೈನ ಸಿನಿಮಾ ಥಿಯೇಟರ್ ನಲ್ಲಿ ರಾಷ್ಟ್ರಗೀತೆ ವೇಳೆ ಎದ್ದು ನಿಲ್ಲದ ಮೂವರು ಯುವಕರಿಗೆ ಪ್ರೇಕ್ಷಕರು ಹೊಡೆದ ಘಟನೆ ನಡೆದಿದೆ.
ಚೆನ್ನೈಯ ಅಶೋಕ್ ನಗರದ ಕಾಸಿ ಥಿಯೇಟರ್ ನಲ್ಲಿ ಈ ಘಟನೆ ಸಂಭವಿಸಿದೆ. ಚೆನ್ನೈ 28-11 ತಮಿಳು ಸಿನಿಮಾ ಪ್ರದರ್ಶನದ ಮಧ್ಯೆ ವಿರಾಮದ ವೇಳೆ ಈ ಹಿಂಸಾತ್ಮಕ ಘಟನೆ ನಡೆದಿದೆ.
20 ಮಂದಿ ಮೂವರು ವಿದ್ಯಾರ್ಥಿಗಳು ಮತ್ತು ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ. ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದಾಗ ಅವರು ಎದ್ದು ನಿಂತು ಗೌರವ ಸೂಚಿಸದೆ ಕುಳಿತುಕೊಂಡು ಸೆಲ್ಫಿ ತೆಗೆಯುತ್ತಿದ್ದರು ಎನ್ನಲಾಗಿದೆ.
ಹಲ್ಲೆಗೂ ಮುನ್ನ ವಿದ್ಯಾರ್ಥಿಗಳಿಗೆ ರಾಷ್ಟ್ರಗೀತೆ ಬರುವಾಗ ಎದ್ದು ನಿಲ್ಲುವಂತೆ ಸೂಚಿಸಿದ್ದರಂತೆ.ಆದರೆ ಅದಕ್ಕೆ ಅವರು ಕ್ಯಾರೇ ಅನ್ನಲಿಲ್ಲ. ಸೆಲ್ಫಿ ತೆಗೆದುಕೊಂಡು ಕುಳಿತಿದ್ದರಂತೆ. ಈ ಬಗ್ಗೆ ವಿಜಯ್ ಕುಮಾರ್ ಎನ್ನುವವರು ರಾಷ್ಟ್ರಕ್ಕೆ ಅಗೌರವ ವಿರೋಧಿ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯಡಿ ದೂರು ದಾಖಲಿಸಿದ್ದಾರೆ.
ಹಲ್ಲೆಗೊಳಗಾದ ಗುಂಪಿನವರೂ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.