ದೆಹಲಿ: ಉದ್ಯಮಿ ವಿಜಯ್ ಮಲ್ಯ ಅವರ ವಿರುದ್ಧ ಸಿಬಿಐ ದೂರು ಆಧರಿಸಿ, ಜಾರಿ ನಿರ್ದೇಶನಾಲಯವು ಇಂದು ಹಣ ದುರುಪಯೋಗದ ಕೇಸ್ ದಾಖಲಿಸಿದೆ.
ವಿಜಯ್ ಮಲ್ಯ ವಿದೇಶಗಳಿಗೆ ಪಲಾಯನ ಮಾಡದಿರಲಿ ಎಂಬ ಉದ್ದೇಶದಿಂದ ಇಡಿ(ಜಾರಿ ನಿರ್ದೇಶನಾಲಯ) ಹಣ ದುರುಪಯೋಗ ನಿಗ್ರಹ ಕಾಯ್ದೆಯಡಿ ‘ಕಿಂಗ್ ಆಫ್ ಗೂಡ್ ಟೈಮ್ಸ್’ ವಿರುದ್ಧ ಪ್ರಾಥಮಿಕ ತನಿಖೆ ಆರಂಭಿಸಿದೆ. ಇದರೊಂದಿಗೆ ವಿಜಯ್ ಮಲ್ಯ ಭಾರತ ಹಾಗೂ ವಿದೇಶಗಳಲ್ಲಿ ಹೊಂದಿರುವ ಆಸ್ತಿಗಳನ್ನು ಪಟ್ಟಿ ಮಾಡಲಿದೆ.
ಪ್ರಕರಣದ ಬಗ್ಗೆ ಈಗಾಗಲೇ ಮಲ್ಯ ಸಿಬಿಐ ಕೂಡಾ ತನಿಖೆ ನಡೆಸುತ್ತಿದ್ದು, ಈಗ ಹಣ ದುರುಪಯೋಗ ನಿಗ್ರಹ ಕಾಯ್ದೆಯಡಿ ಜಾರಿ ನಿರ್ದೇಶನಾಲಯ ವಿಜಯ್ ಮಲ್ಯ ವಿರುದ್ಧ ದೂರು ದಾಖಲಿಸಿದ್ದು, ಈ ಮೂಲಕ ಮಲ್ಯ ಮತ್ತೊಂದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ದೂರು ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ ಮಲ್ಯ ಅವರನ್ನು ಶೀಘ್ರವೇ ಮುಂಬೈನಲ್ಲಿ ವಿಚಾರಣೆಗೊಳಪಡಿಸುವ ಸಾಧ್ಯತೆ ಇರುವುದಾಗಿ ವರದಿಗಳು ತಿಳಿಸಿವೆ.