ರಾಷ್ಟ್ರೀಯ

ಸುಬ್ರಮಣ್ಯಂ ಸ್ವಾಮಿ ವಿರುದ್ಧ ಪ್ರತಿಭಟನೆ, ಮೊಟ್ಟೆ, ಟಮೊಟೊ ಎಸೆತ

Pinterest LinkedIn Tumblr

dd

ಕಾನ್ಪುರ್‌: ನ್ಯಾಷನಲ್ ಹೆರಾಲ್ಡ್ ಪತ್ರಿಕೆ ನಿಧಿ ದುರ್ಬಳಕೆ ಆರೋಪದ ಮೇಲೆ ಸೋನಿಯಾ, ರಾಹುಲ್ ಮತ್ತಿತರ ವಿರುದ್ಧ ದೂರು ದಾಖಲಿಸಿದ್ದನ್ನು ಖಂಡಿಸಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಸ್ವಾಮಿ ಅವರಿಗೆ ಘೇರಾವ್ ಹಾಕಿದ್ದಾರೆ. ಸ್ವಾಮಿಯವರ ಕಾರಿನ ಮೇಲೆ ಮೊಟ್ಟೆ, ಟೊಮೆಟೊ ಎಸೆದು, ಮಸಿ ಚೆಲ್ಲಿ ಘೋಷಣೆ ಕೂಗಿದ್ದಾರೆ.

ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಕಾನ್ಪುರ್‌ದ ವಿಎಸ್‌‌ಎಸ್‌ಡಿ ಕಾಲೇಜ್‌ನಲ್ಲಿ ನಡೆಯುವ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದ ಸೆಮಿನಾರ್‌ನಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಈ ವೇಳೆ ಅವರ ಕಾರನ್ನು ಅಡ್ಡಗಟ್ಟಿದ ಕಾಂಗ್ರೆಸ್‌ ಕಾರ್ಯಕರ್ತರು ಅವರಿಗೆ ಕಪ್ಪು ಬಾವುಟ ತೋರಿಸಿದ್ದಾರೆ.

ಸ್ವಾಮಿ ವಿರುದ್ಧ ಘೋಷಣೆ ಕೂಗಿ ನಂತರ ಅವರ ಕಾರಿನ ಮೇಲೆ ಮಸಿ, ಮೊಟ್ಟೆ ಹಾಗೂ ಟೊಮೆಟೋ ಎಸೆದಿದ್ದಾರೆ.
ಘಟನೆ ಸಂಭವಿಸುತ್ತಿದ್ದಂತೆ ಸಿಆರ್‌ಫಿ ಪಡೆ ಲಾಠಿ ಚಾರ್ಜ್‌ ಮಾಡಿದೆ. ಆದ್ರೂ ಕೈ ಕಾರ್ಯಕರ್ತರು ಇದನ್ನು ವಿರೋಧಿಸಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

Write A Comment