ಪಾಟ್ನಾ: ಬಿಜೆಪಿಯ ಹಳೆಯ ಮಿತ್ರನಾಗಿದ್ದು ಪ್ರಸ್ತುತ ಶತ್ರುವಾಗಿರುವ ಜೆಡಿ-ಯು ವರಿಷ್ಠ ನಿತೀಶ್ ಕುಮಾರ್ ತಮ್ಮ ಪದಗ್ರಹಣ ಸಮಾರಂಭಕ್ಕೆ ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪ ಪ್ರಧಾನಿ ಎಲ್.ಕೆ. ಆಡ್ವಾಣಿ ಮತ್ತು ಪಕ್ಷದ ಇನ್ನೊಬ್ಬ ಹಿರಿಯ ನಾಯಕ, ನಟ ಶತ್ರುಖ್ನ ಸಿನ್ಹಾ ಅವರನ್ನು ಆಹ್ವಾನಿಸಿದ್ದಾರೆ.
ನವೆಂಬರ್ 20 ರಂದು ರಾಜಧಾನಿ ಪಾಟ್ಣಾದ ಗಾಂಧಿ ಮೈದಾನದಲ್ಲಿ ನಿತೀಶ್ ಕುಮಾರ್ ಬಿಹಾರ್ ಮುಖ್ಯಮಂತ್ರಿಯಾಗಿ ಪುನಃ ಶಪಥ ಗ್ರಹಣ ಮಾಡಲಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಿತೀಶ್ ಅವರನ್ನು ಬಹಿರಂಗವಾಗಿ ಹೊಗಳುವ ಮೂಲಕ ಸಿನ್ಹಾ ತಮ್ಮದೇ ಪಕ್ಷದವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತಮ್ಮ ಪಕ್ಷ ಅನುಸರಿಸಿದ ಬಿಹಾರ ಚುನಾವಣಾ ತಂತ್ರವನ್ನು ಸಹ ಅವರು ಬಹಿರಂಗವಾಗಿ ಟೀಕಿಸಿದ್ದಾರೆ.
ನಿನ್ನೆ ನಾಗಪುರದಲ್ಲಿ ಮಾತನಾಡುತ್ತಿದ್ದ ಸಿನ್ಹಾ, ‘ಬಿಹಾರ್ನಲ್ಲಿ 53 ಸ್ಥಾನ ಗೆಲ್ಲಲು ಪ್ರಧಾನಿ ಮೋದಿ ಪ್ರಭಾವವೇ ಕಾರಣ. ಇದರಲ್ಲಿ ಯಾವುದೇ ರೀತಿಯ ಅನುಮಾನ ಬೇಡ. ಪ್ರಧಾನಿ ಮೋದಿ ಬಿಹಾರ್ ರಾಜ್ಯಕ್ಕೆ ಘೋಷಿಸಿದ ವಿಶೇಷ ಪ್ಯಾಕೇಜ್ ಚುನಾವಣೆ ಗಿಮಿಕ್ಕು ಎನ್ನುವುದನ್ನು ಬಿಹಾರ್ ಮತದಾರರು ಅರ್ಥೈಸಿಕೊಂಡಿದ್ದಾರೆ ಎಂದರು ಎಂದು ಮೋದಿ ವಿರುದ್ಧ ನಿನ್ನೆ ಪರೋಕ್ಷ ವಾಗ್ದಾಳಿ ನಡೆಸಿದ್ದರು.