ರಾಷ್ಟ್ರೀಯ

ಭಾರತ್ ಮರುನಾಮಕರಣ ಅನಗತ್ಯ : ಪಿಐಎಲ್ ವಜಾಕ್ಕೆ ಕೇಂದ್ರ ಮನವಿ

Pinterest LinkedIn Tumblr

iplನವದೆಹಲಿ, ನ.16-ದೇಶಕ್ಕೆ ಭಾರತ್ ಎಂದು ಮರುನಾಮಕರಣ ಮಾಡುವ ಅಗತ್ಯವಿಲ್ಲ ಎಂದು ಹೇಳಿರುವ ಕೇಂದ್ರ ಸರ್ಕಾರ, ದೇಶದ ಎಲ್ಲಾ  ಅಧಿಕೃತ-ಅನಧಿಕೃತ ದಾಖಲೆಗಳಲ್ಲಿ ಇಂಡಿಯಾ ಎಂದಿರುವುದನ್ನು ಭಾರತ್ ಎಂದು ಬದಲಾಯಿಸಬೇಕು ಎಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ವಜಾ ಮಾಡುವಂತೆ ಸರ್ವೋಚ್ಚ  ನ್ಯಾಯಾಲಯಕ್ಕೆ  ಮನವಿ  ಮಾಡಿದೆ.

ಈ ಕುರಿತಂತೆ ಸಾಮಾಜಿಕ ಕಾರ್ಯಕರ್ತಕರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಶೀಲಿಸಿದ್ದ ನ್ಯಾಯಾಲಯ ಈ ಕುರಿತಂತೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಗೃಹ ಸಚಿವಾಲಯವನ್ನು ಕೇಳಿತ್ತು.

ಅದಕ್ಕೆ ಉತ್ತರಿಸಿದ ಗೃಹ ಖಾತೆ, ಇಂಡಿಯಾ ಎಂಬುದನ್ನು ಸಂವಿಧಾನ ರಚನೆಯಾದಾಗಲೇ ಉಲ್ಲೇಖಿಸಿದ್ದು ಬದಲಾವಣೆ ಅಗತ್ಯವಿಲ್ಲ ಎಂದಿದೆ.

Write A Comment