ರಾಷ್ಟ್ರೀಯ

ಶತುಘ್ನ ಸಿನ್ಹಾ ಅವರನ್ನು ನಾಯಿ ಎಂದ ಕೈಲಾಶ್ ವಿಜಯ್ ವಗೀರ್ಯ

Pinterest LinkedIn Tumblr

siiiiನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯ ಸೋಲಿನಿಂದ ಜರ್ಜರಿತವಾಗಿರುವ ಬಿಜೆಪಿಯಲ್ಲಿ ಒಳಜಗಳಗಳು ಭುಗಿಲೆದ್ದಿದ್ದು ಪಕ್ಷದ ಉನ್ನತ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿದ್ದಾರೆ.

ಚುನಾವಣೆ ಸಂದರ್ಭಧಲ್ಲಿ ಪಕ್ಷಕ್ಕೆ ಇರಿಸುಮುರಿಸಾಗುವ ಹೇಳಿಕೆ ನೀಡಿದ್ದ ಹಿರಿಯ ನಟ ಹಾಗೂ ಸಂಸದ ಶತ್ರುಘ್ನ ಸಿನ್ಹಾ ಅವರನ್ನು, ಮತ್ತೋರ್ವ ಬಿಜೆಪಿ ನಾಯಕ ಕೈಲಾಶ್ ವಿಜಯ್ ವಗೀರ್ಯ ನಾಯಿಗೆ ಹೋಲಿಕೆ ಮಾಡಿ ವಿವಾದವನ್ನು ತಲೆಗೆಳೆದುಕೊಂಡಿದ್ದಾರೆ.

ಒಂದು ಕಾರು ಹೊರಟರೆ ಅದರಡಿ ಒಂದು ನಾಯಿಯೂ ಹೋಗುತ್ತದೆ. ತನ್ನಿಂದಾಗಿಯೇ ಕಾರು ಚಲಿಸುತ್ತಿದೆ ಎಂದು ನಾಯಿ ಭಾವಿಸುತ್ತದೆ. ಈ ಪಕ್ಷವು ಒಬ್ಬ ವ್ಯಕ್ತಿಯ ಮೇಲೆ ಅವಲಂಬನೆಯಾಗಿಲ್ಲ. ಇಡೀ ಸಂಘಟನೆಯ ಮೇಲೆ ನಿಂತಿದೆ. ಇದರ ಹೊರಗಿದ್ದವರು ‘ಮೌನ ವ‌್ರತ’ದಲ್ಲಿದ್ದರು. ಇದೀಗ ಮಾತನಾಡುತ್ತಿದ್ದಾರೆ’ ಎಂದು ವಿಜಯ್ ವರ್ಗೀಯ ಸಿನ್ಹಾ ವಂಗ್ಯವಾಡಿದ್ದಾರೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ವಿಜಯ್‌ವರ್ಗಿಯ ಅವರು ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಕೆಲ ದಿನಗಳ ಹಿಂದೆ ಬಾಲಿವುಡ್‌ ನಟ ‘ಶಾರುಖ್‌ ಭಾರತದಲ್ಲಿ ವಾಸಿಸುತ್ತಿದ್ದಾರೆ. ಆದರೆ ಅವರ ಆತ್ಮ ಪಾಕಿಸ್ತಾನದಲ್ಲಿದೆ’ ಎಂದೆಲ್ಲ ಸರಣಿ ಟ್ವೀಟ್‌ ಮಾಡಿದ್ದರು. ವಿವಾದದ ಬಳಿಕ ಅವುಗಳನ್ನು ಹಿಂಪಡೆದಿದ್ದರು.

Write A Comment