ಅಹ್ಮದಾಬಾದ್,ಸೆ.3: ಪಟೇಲ್ ಮೀಸಲಾತಿಗಾಗಿ ಗುಜರಾತ್ನಲ್ಲಿ ನಡೆಯುತ್ತಿರುವ ಹೋರಾಟದ ಚುಕ್ಕಾಣಿ ಹಿಡಿದಿರುವ ಹಾರ್ದಿಕ್ ಪಟೇಲ್ ತನ್ನ ಸಮುದಾಯದ ಶಾಸಕರ ಜೊತೆ ನಾಳೆಯಿಂದ ಸಭೆ ನಡೆಸಲಿದ್ದಾರೆ. ದೇಶದಲ್ಲಿಯೇ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಪಟೇಲ್ರಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ಶಾಸಕರ ನಿಲುವೇನು ಎಂಬುದನ್ನು ಅರಿಯುವ ಸಲುವಾಗಿ ಅವರು ಸರಣಿ ಸಭೆಯನ್ನು ಸಂಘಟಿಸಲಿದ್ದಾರೆ.
182 ಸದಸ್ಯಬಲದ ಗುಜರಾತ್ ವಿಧಾನಸಭೆಯಲ್ಲಿ 35ಕ್ಕಿಂತಲೂ ಹೆಚ್ಚು ಪಟೇಲ್ ಸಮುದಾಯಕ್ಕೆ ಸೇರಿದ ಶಾಸಕರಿದ್ದಾರೆ. ಪ್ರತಿಭಟನೆಯ ವೇಳೆ ಪೊಲೀಸರ ಗುಂಡಿಗೆ ಬಲಿಯಾದ ಹಾಗೂ ಗಾಯಗೊಂಡ ಸಂತ್ರಸ್ತರ ಕುಟುಂಬಕ್ಕೆ ಸಹಾಯ ಹಸ್ತಚಾಚಲು ಮುಂದೆ ಬರುವಂತೆ ಸಮುದಾಯವನ್ನು ಅವರು ಕೋರಿ ಕೊಂಡಿದ್ದಾರೆ.
ರಾಷ್ಟ್ರೀಯ