ಗಂಡ ಸತ್ತಾಗ ಆತನ ಚಿತೆಗೆ ಹಾರಿ ಪ್ರಾಣ ಬಿಡುವ ಪದ್ಧತಿ ಭಾರತದಲ್ಲಿತ್ತು. ಈಗ ಈ ಪದ್ಧತಿ ಇಲ್ಲ. ಆದರೆ ಗಂಡನಿಗಾಗಿ ಬಿಹಾರದ ಮಹಿಳೆಯೊಬ್ಬಳು ಏನು ತ್ಯಾಗ ಮಾಡಿದ್ದಾಳೆ ಗೊತ್ತಾ?
ರಾಂಪುರ ಗ್ರಾಮದ ಕಿರಣ್ ದೇವಿ ಎಂಬ ಮಹಿಳೆ ಹಲವು ವರ್ಷಗಳಿಂದ ಆಹಾರ, ನೀರನ್ನೇ ಸೇವಿಸಿಲ್ಲ. ಗಂಡ ಸತ್ತ ನಂತರ ಆಹಾರ ತ್ಯಜಿಸಿರುವ ಮಹಿಳೆ ಸತತ 30 ವರ್ಷಗಳಿಂದ ಬರೀ ಟೀ ಕುಡಿದು ಜೀವನ ಸಾಗಿಸುತ್ತಿದ್ದಾಳೆ. ಆಕೆಯನ್ನು ಅಲ್ಲಿನ ಜನ ಟೀ ಅಜ್ಜಿ, ಟೀ ಚಿಕ್ಕಮ್ಮ ಎಂದೇ ಕರೆಯುತ್ತಾರೆ.
30 ವರ್ಷಗಳ ಹಿಂದೆ ಆಕೆಯ ಪತಿ ಉಪೇಂದ್ರ ಸಿಂಗ್ ಸಾವನ್ನಪ್ಪಿದ್ದ. ಇದರಿಂದ ಬೇಸರಗೊಂಡ ಕಿರಣ್ ದೇವಿ, ಆಹಾರ, ನೀರು ಬಿಟ್ಟು, ಟೀ ಕುಡಿದೇ ಜೀವನ ಸಾಗಿಸುತ್ತಿದ್ದಾಳೆ.
ಒಂದು ದಿನ ನೀರು, ಊಟ ಬಿಟ್ಟರೆ ಇರೋದು ಕಷ್ಟ. ಅಂತಹದ್ರಲ್ಲಿ ಈ ಮಹಿಳೆ 30 ವರ್ಷಗಳಿಂದ ಊಟ ಬಿಟ್ಟರೂ ಆರೋಗ್ಯವಾಗಿರುವುದು ಪವಾಡವೇ ಸರಿ ಎನ್ನುತ್ತಾರೆ ಅಲ್ಲಿನವರು.