ನವದೆಹಲಿ, ಜು.24-ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಪರಿಸರ ಮಾಲಿನ್ಯ, ವಾಯು ಮಾಲಿನ್ಯದಿಂದಾಗಿ ಪ್ರತಿದಿನ 80 ಮಂದಿ ಸಾವಿಗೀಡಾಗುತ್ತಿದ್ದಾರೆ ಎಂದರೆ ನಂಬುತ್ತೀರಾ….?
ನಂಬಲೇಬೇಕು. ಏಕೆಂದರೆ, ಸ್ವತಃ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರೇ ಖುದ್ದಾಗಿ ರಾಜ್ಯ ಸಭೆಗೆ ತಿಳಿಸಿದ್ದಾರೆ! ಅಂತಾರಾಷ್ಟ್ರೀಯ ಅಧ್ಯಯನ ಸಮಿತಿಯೊಂದು ಇತ್ತೀಚೆಗೆ ಈ ವರದಿ ಬಿಡುಗಡೆ ಮಾಡಿದೆಯಂತೆ.
ದೆಹಲಿ ನಗರದಲ್ಲಿ ಹೆಚ್ಚುತ್ತಿರುವ ಪರಿಸರ ಮಾಲಿನ್ಯ ಇಲ್ಲಿನ ಜನರ ಮೇಲೆ ಉಸಿರಾಟದ ತೊಂದರೆ, ಹೃದಯ ಸಂಬಂಧ ಕಾಯಿಲೆಗಳು ನಿರಂತರವಾಗಿ ದಾಳಿ ಮಾಡುತ್ತಲೇ ಇರುತ್ತವೆ. ಈ ಕಾಯಿಲೆಗೆ ತುತ್ತಾದ ಜನ ಸಾವನ್ನಪ್ಪುತ್ತಾರೆ ಎಂದು ಜಾವ್ಡೇಕರ್ ತಿಳಿಸಿದ್ದಾರೆ.