ರಾಷ್ಟ್ರೀಯ

ಪತ್ರಕರ್ತನ ತಾಯಿಯನ್ನು ಠಾಣೆಯಲ್ಲೇ ಬೆಂಕಿ ಹಚ್ಚಿ ಕೊಂದ ಪೊಲೀಸರ ಅಮಾನುಷ ಕೃತ್ಯ

Pinterest LinkedIn Tumblr

woman

ಬಾರಾಬಂಕಿ (ಉತ್ತರಪ್ರದೇಶ), ಜು.7: ತನ್ನ ಪತಿಯ ಬಿಡುಗಡೆಗೆ ಲಂಚ ನೀಡಲು ನಿರಾಕರಿಸಿದ್ದ ಪತ್ರಕರ್ತನ ತಾಯಿಗೆ ಪೊಲೀಸರು ಠಾಣೆಯಲ್ಲೇ ಬೆಂಕಿ ಹಚ್ಚಿ ಪ್ರಕರಣದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಕೊನೆಗೂ ಇಂದು ಕೊನೆಯುಸಿರೆಳೆದಿದ್ದಾರೆ.

ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಈ ಅಮಾನವೀಯ ಘಟನೆ ನಡೆದಿತ್ತು. ಶೇ.90ರಷ್ಟು ಸುಟ್ಟು ಹೋಗಿದ್ದ ಮಹಿಳೆಯನ್ನು ಲಕ್ನೌದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಇಂದು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹಮೀದ್ ಅಬ್ದುಲ್ ತಿಳಿಸಿದ್ದಾರೆ.

ತನ್ನ ಪತಿಯ ಬಿಡುಗಡೆಗೆ 1 ಲಕ್ಷ ರೂ. ಲಂಚ ನೀಡುವಂತೆ ಕೇಳಿದರು. ಆಗ ನಾನು ಅದಕ್ಕೆ ಒಪ್ಪಲಿಲ್ಲ. ಆಗ ಕೋಠಿಠಾಣೆ ಪೊಲೀಸರು ಈ ಕೃತ್ಯ ಮಾಡಿದರು ಎಂದು ಮಹಿಳೆ ಆಸ್ಪತ್ರೆಯಲ್ಲಿ ನೀಡಿದ್ದ ಮರಣಪೂರ್ವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Write A Comment