ರಾಷ್ಟ್ರೀಯ

ದನಗಳ್ಳ ಎಂದು ಶಂಕಿಸಿ ವ್ಯಕ್ತಿಯೋರ್ವನನ್ನು ಕೊಂದು ಹಾಕಿದ ಜನರ ಗುಂಪು

Pinterest LinkedIn Tumblr

Cattle Missing

ಗೌಹಾಟಿ: ದನಗಳ್ಳ ಎಂದು ಶಂಕಿಸಿ ಒಬ್ಬನನ್ನು ಜನರ ಗುಂಪು ಕೊಂದು ಅವನ ವಾಹನಕ್ಕೆ ಬೆಂಕಿ ಹಚ್ಚಿದ ಘಟನೆ ಅಸ್ಸಾಮಿನ ಗೋಲಾಘಾಟ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 73 ನ್ನು ಈ ಗುಂಪು ತಡೆ ಹಾಕಿ, ಶಂಕಿತ ದನಗಳ್ಳನ ಸಹಚರರನ್ನು ಬಂಧಿಸಬೇಕೆಂದು ಪೊಲೀಸರನ್ನು ಆಗ್ರಹಿಸಿದೆ. ಆರು ಹಸುಗಳನ್ನು ಕೊಂಡೊಯ್ಯುತ್ತಿದ್ದ ವಾಹನವನ್ನು ಅಡ್ಡಗಡ್ಡಿದ ಕೆಲವು ಪ್ರಾದೇಶಿಕ ನಿವಾಸಿಗಳು ನಡುರಾತ್ರಿ ಸುಮಾರು 2 ಘಂಟೆಗೆ ಈ ಕೃತ್ಯವನ್ನು ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

“ಜನರು ಹಸುಗಳನ್ನು ಕೊಂಡದ್ದಕ್ಕೆ ರಸೀದಿಯನ್ನು ತೋರಿಸುವಂತೆ ಕೇಳಿದ್ದಾರೆ. ರಸೀದಿಯನ್ನು ತೋರಿಸದಿದ್ದಕ್ಕೆ ಚಾಲಕನನ್ನು ಹಸುಗಳ್ಳ ಎಂದು ಶಂಕಿಸಿ ಜನರು ಅವನ ಮೇಲೆ ದಾಳಿ ಮಾಡಿದ ಪರಿಣಾಮವಾಗಿ ಅವನು ಮೃತಪಟ್ಟಿದ್ದಾನೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತ ಮನುಷ್ಯನನ್ನು ಜುಂತಿ ಅಲಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಪ್ರಕರಣವನ್ನು ದಾಖಲಿಸಲಾಗಿದೆ.

Write A Comment