ರಾಷ್ಟ್ರೀಯ

ಹೇಮಮಾಲಿನಿಯವರ ಮರ್ಸಿಡಿಸ್ ಬೆಂಜ್ ಕಾರು ಡಿಕ್ಕಿ: ಚಿಕಿತ್ಸೆ ಸಿಕ್ಕಿದ್ದಿದ್ರೆ ಮಗು ಉಳೀತ್ತಿತ್ತು..!

Pinterest LinkedIn Tumblr

hema-malini_accident

ಜೈಪುರ/ಮುಂಬೈ: “ನನ್ನ ಮಗುವಿಗೆ ಶೀಘ್ರವೇ ಚಿಕಿತ್ಸೆ ಕೊಡಿಸುತ್ತಿದ್ದರೆ ಆಕೆ ಬದುಕಿ ಉಳಿಯುತ್ತಿದ್ದಳು. ಬಿಜೆಪಿ ನಾಯಕಿ ಹೇಮಮಾಲಿನಿಗೆ ನೀಡಿದಷ್ಟೇ ಆದ್ಯತೆ ನೀಡಿದ್ದರೆ ಮಗಳು  ಉಳಿಯುತ್ತಿದ್ದಳು” ಎಂದು ರಾಜಸ್ಥಾನದ ದೌಸಾದಲ್ಲಿ ಅಸುನೀಗಿದ ಹೆಣ್ಣು-ಮಗುವಿನ ತಂದೆ ಹನುಮಾನ್ ಖಂಡೇಲ್‍ವಾಲ್ ಆರೋಪಿಸಿದ್ದಾರೆ.

ಬಿಜೆಪಿ ನಾಯಕಿ ಹೇಮಮಾಲಿನಿಯವರ ಮರ್ಸಿಡಿಸ್ ಬೆಂಜ್ ಕಾರು ಜೈಪುರ ನಿವಾಸಿ ಖಂಡೇಲ್ ವಾಲ್‍ರ ಮಾರು ತಿ ಆಲ್ಟೋಗೆ ಡಿಕ್ಕಿ ಹೊಡೆದಿತ್ತು. ದುರಂತ-ದಲ್ಲಿ 2 ವರ್ಷ ದ ಹೆಣ್ಣು ಮಗು ಚಿನ್ನಿ ಅಸುನೀಗಿದ್ದಳು. ಜತೆಗೆ ಗಾಯಗೊಂಡವರ ಯೋಗಕ್ಷೇಮವನ್ನೂ ಬಿಜೆಪಿ ನಾಯಕಿ ವಿಚಾರಿಸಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಆಸ್ಪತ್ರೆಯಲ್ಲಿ ವೈದ್ಯರೂ ಕೂಡ ಹೆಚ್ಚಿನ ಆದ್ಯತೆ  ನೀಡಲಿಲ್ಲ ಎಂದು ದೂರಿದ್ದಾರೆ.

ಮತ್ತೊಂದೆಡೆ ಅಜಾರೂಕತೆಯಿಂದ ವಾಹನ ಚಲಾಯಿಸಿದ ಆರೋಪಕ್ಕೆ ಸಂಬಂಧಿಸಿ ಹೇಮ ಮಾಲಿನಿ ಕಾರು ಚಾಲಕನನ್ನು ಬಂಧಿಸಲಾಗಿದೆ. ಇದೇ ವೇಳೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಬಿಜೆಪಿ  ನಾಯಕಿಗೆ ಸಣ್ಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

Write A Comment