ನವದೆಹಲಿ: ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ಅವರೊಂದಿಗೆ ನೇರ ವ್ಯವಹಾರಿಕ ಸಂಬಂಧ ಹೊಂದಿದ್ದಾರೆ ಎಂದು ಸೋಮವಾರ ಕಾಂಗ್ರೆಸ್ ಆರೋಪಿಸಿದೆ.
ವಸುಂಧರಾ ರಾಜೇ ಹಾಗೂ ಅವರ ಪುತ್ರ ದುಶ್ಯಂತ್ ಸಿಂಗ್, ಸೊಸೆ ನಿಹಾರಿಕಾ ಸಿಂಗ್ ಮತ್ತು ಲಲಿತ್ ಮೋದಿ ಒಡೆತನದ ನಿಯಾಂತ್ ಪ್ರೈ. ಲಿಮಿಟೆಡ್, ರಾಜಸ್ಥಾನ ಧೋಲ್ಪುರಿ ಸರ್ಕಾರಿ ಅರಮನೆಯನ್ನು ತಮ್ಮ ಸ್ವಾರ್ಥಕ್ಕಾಗಿ ಐಶಾರಾಮಿ ಹೋಟೆಲ್ ಆಗಿ ಪರಿವರ್ತಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ದೂರಿದ್ದಾರೆ.
ಲಲಿತ್ ಮೋದಿ ಹಾಗೂ ವಸುಂಧರಾ ರಾಜೇ ಬ್ಯುಸಿನೆಸ್ ಪಾರ್ಟ್ನರ್ ಆಗಿದ್ದು, ರಾಜೇ ಸರ್ಕಾರಿ ಆಸ್ತಿಯನ್ನು ಸ್ವಂತದ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ, ಜೈರಾಮ್ ರಮೇಶ್ ದಾಖಲೆಗಳನ್ನು ಬಿಡುಗಡೆ ಮಾಡಿದರು.
ರಾಜೇ ಸರ್ಕಾರಿ ಆಸ್ತಿಯನ್ನು ಐಶಾರಾಮಿ ಹೋಟೆಲ್ ಆಗಿ ಪರಿವರ್ತಿಸಿದ್ದಾರೆ. ಧೋಲ್ಪುರಿ ಅರಮನೆಯನ್ನು ನಿಯಾಂತ್ ಹೆರಿಟೇಜ್ ಪ್ರೈ.ಲಿಮಿಟೆಡ್ ನಡೆಸುತ್ತಿದೆ ಎಂದು ಜೈರಾಮ್ ರಮೇಶ್ ಹೇಳಿದರು.