ರಾಷ್ಟ್ರೀಯ

ಶ್ರೀನಗರದಲ್ಲಿ ಏರ್ ಇಂಡಿಯಾ ವಿಮಾನದ ಟೈರ್ ಸ್ಫೋಟ; ಕೂದಲೆಳೆಯ ಅಂತರದಿಂದ ಬದುಕುಳಿದ ಪ್ರಯಾಣಿಕರು

Pinterest LinkedIn Tumblr

air-india

ಶ್ರೀನಗರ: ಜಮ್ಮು ಶ್ರೀನಗರ ಮಾರ್ಗಮಧ್ಯದ ಏರ್ ಇಂಡಿಯಾ ವಿಮಾನದ ಕೂದಲೆಳೆಯ ಅಂತರದಿಂದ ಬದುಕುಳಿದಿದ್ದಾರೆ.

ಸೋಮವಾರ ವಿಮಾನ ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಟೈರ್ ಸ್ಫೋಟಗೊಂಡಿದ್ದರೂ ಯಾರಿಗೂ ಹಾನಿಯಾಗಿಲ್ಲ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 150 ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏರ್ ಪೋರ್ಟ್ ನ ರನ್ ವೇ ಮಧ್ಯದಲ್ಲೇ ವಿಮಾನ ನಿಂತಿದ್ದು, ರನ್ ವೇ ಕೂಡ ಹಾನಿಗೊಂಡದ್ದರಿಂದ ಎಲ್ಲ ವಿಮಾನ ಹಾರಾಟಗಳನ್ನು ರದ್ದುಪಡಿಸಲಾಗಿದೆ. ಶ್ರೀನಗರದಿಂದ ಹೊರಡಬೇಕಿದ್ದ ಎಲ್ಲ ವಿಮಾನಗಳು ತಡವಾಗಿ ಹೊರಡಲಿದ್ದು, ಶ್ರೀನಗರದಲ್ಲಿ ಇಳಿಯಬೇಕಿದ್ದ ಎಲ್ಲ ವಿಮಾನಗಳನ್ನು ಚಂಡೀಘರ್ ವಿಮಾನ ನಿಲ್ದಾಣದತ್ತ ತಿರುಗಿಸಲಾಗಿದೆ.

Write A Comment