ನವದೆಹಲಿ: ಕೇಜ್ರಿವಾಲ್ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಎಎಪಿ ಶಾಸಕ ಸೋಮನಾಥ್ ಭಾರ್ತಿ ಕಳೆದ ಬಾರಿ ದೆಹಲಿ ಪೊಲೀಸರ ಜತೆ ಸಂಘರ್ಷಕ್ಕಿಳಿದು ಸುದ್ದಿ ಮಾಡಿದ್ದರು. ಆದರೆ ಈ ಬಾರಿ ಕೌಟುಂಬಿಕ ಹಿಂಸಾಚಾರ ದೂರಿನ ಪ್ರಕರಣದಲ್ಲಿ ಮಾಜಿ ಕಾನೂನು ಸಚಿವರು ಸುದ್ದಿ ಮಾಡಿದ್ದಾರೆ.
ಅವರ ವಿರುದ್ಧ ಕೌಟುಂಬಿಕ ಹಿಂಸಾಚಾರದ ದೂರು ನೀಡಿದ್ದು ಸ್ವತಃ ಅವರ ಪತ್ನಿ. ಅವರ ಪತ್ನಿ ದೆಹಲಿ ಮಹಿಳಾ ಆಯೋಗವನ್ನು ಸಂಪರ್ಕಿಸಿ ತಮ್ಮ ಮೇಲೆ ಹಲ್ಲೆ ಮಾಡಲಾಗಿದ್ದು ಕೌಟುಂಬಿಕ ಹಿಂಸೆಗೆ ಒಳಗಾಗಿದ್ದಾಗಿ ಆರೋಪಿಸಿದ್ದಾರೆ.
2010ರಿಂದ ತಮಗೆ ಸೋಮನಾಥ್ ಭಾರ್ತಿ ಕೌಟುಂಬಿಕ ಕಿರುಕುಳ ನೀಡುತ್ತಿದ್ದಾರೆಂದು ಅವರು ಆರೋಪದಲ್ಲಿ ತಿಳಿಸಿದ್ದರು. ದೆಹಲಿ ಮಹಿಳಾ ಆಯೋಗ ಈ ಕುರಿತು ಭರ್ತಿ ಅವರಿಗೆ ಜೂನ್ 26ರಂದು ಹಾಜರಾಗುವಂತೆ ಸಮ್ಮನ್ಸ್ ಕಳಿಸಿದೆ.