ನವದೆಹಲಿ (ಡಿಎಚ್): ಭಾರತದಲ್ಲಿ ನೆಲೆಸಿರುವವರೆಲ್ಲಾ ಹಿಂದೂಗಳು ಎಂದು ಬಿಜೆಪಿಯ ಹಿರಿಯ ನಾಯಕ ಸುಬ್ರಮಣ್ಯಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಗುಜರಾತ್ನಲ್ಲಿ ನಡೆದ ‘ವಿದ್ಯಾರ್ಥಿ ಸಂಸತ್ತು’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಆಂಗ್ಲ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
‘ಭಾರತದಲ್ಲಿ ಹಿಂದೂ ಧರ್ಮವನ್ನು ಬಿಟ್ಟು ಬೇರೆ ಧರ್ಮವನ್ನು ಪಾಲಿಸುತ್ತಿರುವವರು ಅವರ ಧರ್ಮಗಳು ಇರುವ ದೇಶಗಳಿಗೆ ಹೋಗಲಿ ಎಂದಿದ್ದಾರೆ.
ಬೇರೆ ದೇಶಗಳಲ್ಲಿರುವ ಇತರೆ ಧರ್ಮದವರು ಅಪಾಯದಲ್ಲಿದ್ದಾರೆ. ಅವರು ಭಾರತಕ್ಕೆ ಬಂದು ನೆಲೆಸುತ್ತಿದ್ದಾರೆ ಎಂದು ಸುಬ್ರಮಣ್ಯಸ್ವಾಮಿ ಹೇಳಿಕೆ ನೀಡಿದ್ದಾರೆ.
(ಪ್ರಜಾವಾಣಿ)