ಹೈದರಾಬಾದ್: ಹಣ ತೆಗೆಯಲೆಂದು ಎಸ್ಬಿಐ ಎಟಿಎಂ ಒಳಗೆ ತೆರಳಿದ್ದ ಯುವತಿಯ ಮೇಲೆ ಏಕಾಯೇಕಿ ದಾಳಿ ನಡೆಸಿದ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ ಹಣ, ಆಭರಣಗಳನ್ನು ದೋಚಿದ್ದಾನೆ. ಇಂದು ಮುಂಜಾನೆ ಸುಮಾರು 8 ಗಂಟೆಗೆ ಈ ಘಟನೆ ನಡೆದಿದೆ.
ಹೈದರಾಬಾದ್ನ ಯೂಸುಫ್ಗುಡದಲ್ಲಿ ಲಲಿತಾ (25) ದಾಳಿಗೊಳಪಟ್ಟ ಮಹಿಳೆಯಾಗಿದ್ದು, ಅದೃಷ್ಟವಶಾತ್ ಯುವತಿಗೆ ಗುಂಡೇಟು ತಗುಲಿಲ್ಲ.
ಸಾಫ್ಟವೇರ್ ಉದ್ಯೋಗಿಯಾಗಿರುವ ಶ್ರೀಲತಾ ಎಟಿಎಂ ಒಳಗೆ ಪ್ರವೇಶಿಸುತ್ತಿದ್ದಂತೆ ಶಸ್ತ್ರಾಸ್ತ್ರದೊಂದಿಗೆ ಒಳ ನುಗ್ಗಿದ ವ್ಯಕ್ತಿಯೋರ್ವ ಆಕೆಯ ಮೇಲೆ ದಾಳಿ ನಡೆಸಿದ್ದಾನೆ. ಆರೋಪಿಯನ್ನು ಪೊಲೀಸರು ವೀಡಿಯೊ ಫೂಟೇಜ್ ಪಡೆದು ಪರಿಶೀಲಿಸುತ್ತಿದ್ದಾರೆ.
ಈ ಘಟನೆ ಬೆಂಗಳೂರಿನ ಕಾರ್ಪೋರೇಶನ್ ಬ್ಯಾಂಕ್ ಎಟಿಎಂ ಒಂದರಲ್ಲಿ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಮೇಲೆ ನಡೆದ ದಾಳಿಯನ್ನೇ ಹೋಲುತ್ತಿದೆ. ಜ್ಯೋತಿ ಅವರಿಗೆ ಮಚ್ಚಿನಿಂದ ಭೀಕರವಾಗಿ ಹಲ್ಲೆ ಮಾಡಲಾಗಿತ್ತು. ಅವರ ಮೇಲೆ ದಾಳಿ ಮಾಡಿದ್ದ ಆರೋಪಿಯನ್ನು ಸಹ ಇಲ್ಲಿಯವರೆಗೆ ಬಂಧಿಸಲಾಗಿಲ್ಲ.