ಸಮುದಾಯವೊಂದರ ಬಗೆಗೆ ಅವಹೇಳನಕಾರಿ ಮೆಸೇಜ್ ಅನ್ನು ಕಳುಹಿಸುತ್ತಿದ್ದ ಉಪಪ್ರಾಂಶುಪಾಲನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ರಾಯ್ ಬರೇಲಿಯಲ್ಲಿ ನಡೆದಿದೆ.
ಶಾಲೆಯೊಂದರ ಉಪಪ್ರಾಂಶುಪಾಲನಾಗಿರುವ ಅನುರಾಗ್ ಭೂಷಣ್ ತನ್ನ ವಾಟ್ಸಪ್ ಮೂಲಕ ಒಂದು ಸಮುದಾಯಕ್ಕೆ ಅಪಮಾನವಾಗುವಂತಹ ಸಂದೇಶಗಳನ್ನು ಕಳುಹಿಸಿ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾನೆ ಎಂದು ನಿನ್ನೆ ನವಾಬ್ ಗಂಜ್ ಪ್ರದೇಶದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಈ ಬಗೆಗೆ ತಕ್ಷಣ ಕ್ರಮ ತೆಗೆದುಕೊಲ್ಲಬೀಕು ಎಂದು ಒತ್ತಾಯಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು.
ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಅನುರಾಗ್ನನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದು ಶಾಲೆಯ ಅಡಳಿತ ಮಂಡಳಿಯೂ ಸಹ ಆತನನ್ನು ಕೆಲಸದಿಂದ ವಜಾಗೊಳಿಸಿದೆ.