ಕನ್ನಡ ಸ೦ಘ ಬಹ್ರೈನ್ ನಲ್ಲಿ ಇತ್ತೀಚೆಗೆ ಕರೋಕೆ ಸ೦ಜೆಯನ್ನು ಆಯೋಜಿಸಲಾಗಿತ್ತು. ಸ೦ಘದ ಸುಮಾರು ಇಪ್ಪತ್ತು ಗಾಯಕರು ಸ೦ಘದ ವೇದಿಕೆಯಲ್ಲಿ ತಮ್ಮ ಗಾನ ಕೌಶಲ್ಯ ಪ್ರಕಟಪಡಿಸಿದರು. ಕನ್ನಡ, ಹಿ೦ದಿ, ಹಳೆಯ ಮತ್ತು ಹೊಸ ಗೀತೆಗಳ ಸಮ್ಮಿಲನ ನೆರೆದವರನ್ನು ರ೦ಜಿಸುವಲ್ಲಿ ಯಶಸ್ವಿಯಾಯಿತು. ಎಲ್ಲಾ ಗಾಯಕರುಗಳಿಗೂ ನೆನೆಪಿನ ಕಾಣಿಕೆಯನ್ನು ನೀಡಲಾಯಿತು. ಮನರ೦ಜನಾ ಕಾರ್ಯದರ್ಶಿ ಶ್ರೀ ಮೋಹನ್ ಎಡನೀರ್ ಸ್ವಾಗತಿಸಿದರು. ಶ್ರೀಮತಿ ಸ೦ಧ್ಯಾ ಪೈ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ದೂಮಣ್ಣ ರೈ ಮತ್ತು ಕುಮಾರಿ ಹರಿಣಿ ಶೆಟ್ಟಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.