ಕನ್ನಡ ವಾರ್ತೆಗಳು

ಮೃತ ಪತ್ರಕರ್ತ ಹೈಮದ್ ಹುಸೇನ್ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ : ಪೂಜಾರಿ ಘೋಷಣೆ

Pinterest LinkedIn Tumblr

poojary_congress_meet_2

ಮಂಗಳೂರು, ಎ.9: ಪ್ರಜಾವಾಣಿ ವರದಿಗಾರ ಹೈಮದ್ ಹುಸೇನ್ ಅವರ ಕಾಲಿನ ನಿಧನದ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಒಂದು ಲಕ್ಷ ಪರಿಹಾರವನ್ನು ನೀಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಘೋಷಿಸಿದ್ದಾರೆ.

ನಗರದಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಹೈಮದ್ ಹುಸೇನ್ ಅವರ ಕುಟುಂಬಕ್ಕೆ ನನ್ನ ನಿಧಿಯಿಂದ 25 ಸಾವಿರ, ಶಾಸಕ ಜೆ.ಆರ್. ಲೋಬೋ ಅವರ 25 ಸಾವಿರ , ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಿಂದ 25 ಸಾವಿರ ಮತ್ತು ಪುತ್ರ ದೀಪಕ್ ಪೂಜಾರಿಯಿಂದ 25 ಸಾವಿರ ರೂಪಾಯಿಯನ್ನು ಒಟ್ಟು ಸೇರಿಸಿ ಒಂದು ಲಕ್ಷ ರೂಪಾಯಿಯನ್ನು ಅವರ ಕುಟುಂಬಕ್ಕೆ ಪರಿಹಾರವಾಗಿ ನೀಡಲಾಗುವುದು ಎಂದು ಘೋಷಿಸಿದರು.

poojary_congress_meet_4 poojary_congress_meet_3 poojary_congress_meet_1

ಪರಿಣಾಮಾಕಾರಿಯಾಗಿ ವರದಿಯನ್ನು ಬರೆಯುತ್ತಿದ್ದ ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ಸಣ್ಣ ಪ್ರಾಯದಲ್ಲಿ ಅವರು ನಿಧನರಾಗಿರುವುದು ದುಖ ತಂದಿದೆ ಎಂದು ಹೇಳಿದರು.

ಇದೇ ವೇಳೆ ಹೈಮದ್ ಹುಸೇನ್ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷದ ವೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

Write A Comment