ಕಾಸರಗೋಡು, ನ.11: ಕಾರು ಡಿಕ್ಕಿ ಹೊಡೆದು ಪಾದಚಾರಿಯೋರ್ವರು ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ನಗರದ ಹೊರವಲಯದ ಅಡ್ಕತ್ತಬೈಲ್ನಲ್ಲಿ ಸಂಭವಿಸಿದೆ.
ಅಡ್ಕತ್ತಬೈಲ್ ಶಾಲೆಯ ಬಳಿಯ ನಿವಾಸಿ ಸಂಜೀವ್ (65) ಮೃತ ವ್ಯಕ್ತಿಯಾಗಿದ್ದು, ಕರಂದಕ್ಕಾಡ್ನಲ್ಲಿ ಪೈಂಟಿಂಗ್ ವೃತ್ತಿಯನ್ನು ನಿರ್ವಹಿಸುತ್ತಿದ್ದು. ನಿನ್ನೆ ರಾತ್ರಿ ಸಂಜೀವ ಅಡ್ಕತ್ತಬೈಲ್ನಲ್ಲಿ ರಸ್ತೆ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದಾಗ ಅತಿವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆಸೆಯಲ್ಪಟ್ಟ ಸಂಜೀವ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಕಾಸರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.