ಹೆಬ್ರಿ, ನ.೧೧: ಬೆಳ್ವೆ ಸಮೀಪದ ಚಾರಾ ಗ್ರಾಮದ ಪ್ರವಾಸಿ ತಾಣ ಜೋಮ್ಲು ತೀರ್ಥದಲ್ಲಿ ಹದಿಹರೆಯದ ಯುವಕನೋರ್ವ ಮುಳುಗಿ ಮೃತಪಟ್ಟ ಘಟನೆ ನಿನ್ನೆ ಸಂಭವಿಸಿದೆ.ಮೃತನನ್ನು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ನಿವಾಸಿ ಅನಿಲ್ ಪಿಂಟೋ (17) ಎಂದು ಗುರುತಿಸಲಾಗಿದೆ.
ಅನಿಲ್ ಪಿಂಟೋ ಸೇರಿದಂತೆ ಭಾರತದ ವಿವಿಧ ರಾಜ್ಯಗಳ ಸುಮಾರು 28 ವಿದ್ಯಾರ್ಥಿಗಳು ಕಟಪಾಡಿಯ ಹೋಲಿ ಕ್ರಾಸ್ ಧಾರ್ಮಿಕ ಸಂಸ್ಥೆಯಲ್ಲಿ ಧರ್ವಗುರು ಶಕ್ಷಣವನ್ನು ಪಡೆಯುತ್ತಿದ್ದು ನಿನ್ನೆ ಇವರೆಲ್ಲ ಫಾದರ್ ರಾಯಲ್ ನಜೀರ್ನ ನೇತೃತ್ವದಲ್ಲಿ ಜೋಮ್ಲು ತೀರ್ಥಕ್ಕೆ ಪ್ರವಾಸ ತೆರಳಿದ್ದರು. ವಾಪಸಾಗುವಾಗ ವಾಹನದಲ್ಲಿದ್ದ ವಿದ್ಯಾರ್ಥಿಗಳನ್ನು ಲೆಕ್ಕ ಮಾಡಿದಾಗ ಅನಿಲ್ ನಾಪತ್ತೆಯಾಗಿದ್ದ ಜೋಮ್ಲು ತೀರ್ಥಕ್ಕೆ ವಾಪಸಾಗಿ ಹುಡುಕಾಡಿದಾಗ ನದಿಯಲ್ಲಿ ಅನಿಲ್ನ ಶವ ಪತ್ತೆಯಾಗಿದೆ. ನದಿಗೆ ಈಜಲು ಇಳಿದ ಸಂದರ್ಭ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆನ್ನಲಾಗಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ.