ಕನ್ನಡ ವಾರ್ತೆಗಳು

ಮಗುವಿನ ಅನಾರೋಗ್ಯಕ್ಕೆ ನೊಂದ ತಾಯಿ ನೇಣಿಗೆ ಶರಣು.

Pinterest LinkedIn Tumblr

su

ಮೂಡುಬಿದಿರೆ, ಸೆ.19: ಮಗುವಿನ ಅನಾರೋಗ್ಯದಿಂದ ನೊಂದ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕೊಡಂಗಲ್ಲಿನಲ್ಲಿ ನಡೆದಿದೆ. ಕೊಡಂಗಲ್ಲು ಅಯ್ಯಪ್ಪ ಗುಡಿ ಬಳಿಯ ನಿವಾಸಿ ಲಕ್ಷ್ಮಿಕುಮಾರ್ ಎನ್ನುವವರ ಪತ್ನಿ ಕಸ್ತೂರಿ (33) ಮೃತ ಮಹಿಳೆ.

ಈ ದಂಪತಿಗೆ ಎರಡು ವರ್ಷದ ಮಗುವಿದೆ. ಮಗುವಿನ ಬೆನ್ನಿನಲ್ಲಿ ಗಡ್ಡೆಯೊಂದು ಬೆಳಿದ್ದು, ಸಾಕಷ್ಟು ಚಿಕಿತ್ಸೆ ಮಾಡಿಸಿದ್ದರೂ ನಿವಾರಣೆಯಾಗಿರಲಿಲ್ಲ. ಅಲ್ಲದೆ ಎರಡು ವರ್ಷಗಳಾಗಿದ್ದರೂ ಮಗು ಇನ್ನೂ ನಡೆದಾಡುತ್ತಿಲ್ಲ. ಇದರಿಂದಾಗಿ ಕಸ್ತೂರಿ ಮಾನಸಿಕವಾಗಿ ನೊಂದುಕೊಂಡಿದ್ದರೆನ್ನಲಾಗಿದೆ. ಬಹುಶಃ ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಅವರು ಮನೆಯ ಬೆಡ್ ರೂಮ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment