ಕನ್ನಡ ವಾರ್ತೆಗಳು

ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಪ್ರಕಾಶ್ ನಾಯಕ್

Pinterest LinkedIn Tumblr

Prakash_nayak_photo

ಮಂಗಳೂರು ಅಗಸ್ಟ್.31 : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಪ್ರಕಾಶ್ ನಾಯಕ್ ಆಯ್ಕೆಯಾಗಿದ್ದಾರೆ.
ಸಂಘದ ಇತ್ತೀಚೆಗೆ ನಡೆದ ಸಭೆಯಲ್ಲಿ, ಹಾಲಿ ಪ್ರಧಾನ ಕಾರ್ಯದರ್ಶಿ ಆಗಿರುವ ಪ್ರಕಾಶ್ ನಾಯಕ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಪ್ರಕಾಶ್ ನಾಯಕ್ ಅವರು ನ್ಯಾಯಾಂಗ ಇಲಾಖೆಯಲ್ಲಿ ಶಿರಸ್ತೇದಾರ್ ಆಗಿದ್ದಾರೆ. ದ.ಕ ಜಿಲ್ಲಾ ಸರಕಾರಿ ಅಧಿಕಾರಿಗಳ ಸಹಕಾರಿ ಸಂಘದ ನಿರ್ದೇಶಕರೂ ಆಗಿದ್ದಾರೆ.

ಮಂಗಳೂರು ನಗರವನ್ನು ಬಿ ದರ್ಜೆಯ ನಗರವನ್ನಾಗಿ ರಾಜ್ಯ ಸರಕಾರವು ಪರಿಗಣಿಸಿ, ಸರಕಾರಿ ನೌಕರರ ಮನೆಬಾಡಿಗೆ ಭತ್ಯೆಯನ್ನು ದುಪ್ಪಟ್ಟುಗೊಳಿಸುವಲ್ಲಿ ಪ್ರಕಾಶ್ ನಾಯಕ್ ಸರಕಾರಿ ನೌಕರರ ಸಂಘದಿಂದ ಬಹಳ ಶ್ರಮಿಸಿದ್ದರು. ನ್ಯಾಯಾಂಗ ಇಲಾಖಾ ನೌಕರರ ಸಂಘದ ಜಿಲ್ಲಾಧ್ಯಕ್ಷರೂ ಆಗಿರುವ ಅವರು, ನ್ಯಾಯಾಂಗ ಇಲಾಖಾ ನೌಕರರಿಗೆ ಎಫ್‌ಎನ್‌ಜೆಪಿಸಿ ಆಧಾರದಲ್ಲಿ ಸೇವಾ ಸೌಲಭ್ಯ ಸಿಗಲು ಪ್ರಯತ್ನಪಟ್ಟಿದ್ದರು.

Write A Comment